Kannada NewsKarnataka NewsLatest

ಮಾರಿಹಾಳ ಗ್ರಾಮಕ್ಕೆ ಸಾಂಸ್ಕೃತಿಕ ಭವನ: ಲಕ್ಷ್ಮಿ ಹೆಬ್ಬಾಳಕರ್ ಭರವಸೆ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ​ ಮಾರೀಹಾಳ ಗ್ರಾಮದ ಮರಾಠಾ ಸಮಾಜದ ಮುಖಂಡರು ​ ಶಾಸ​ಕಿ​ ಲಕ್ಷ್ಮೀ  ಹೆಬ್ಬಾಳಕರ ​ಅ​ವರನ್ನು ಭೇಟಿಯಾಗಿ, ಮಾರೀಹಾಳ ಗ್ರಾಮದಲ್ಲಿ “ಮರಾಠಾ ಸಾಂಸ್ಕೃತಿಕ ಭವನ” ನಿರ್ಮಾಣ ಮಾಡಲು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. 
ಸಮಾಜದ ಮುಖಂಡರ ಮನವಿಯನ್ನು ಸ್ವೀಕರಿಸಿ​ದ ಲಕ್ಷ್ಮಿ ಹೆಬ್ಬಾಳಕರ್,​ ಆದಷ್ಟು ಬೇಗ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ  ಸಲ್ಲಿಸಿ, ಮಂಜೂರು ಮಾಡಿಸಿಕೊಡುವುದಾಗಿ ​ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ರಾಮಚಂದ್ರ ಚವ್ಹಾಣ, ಬಸವರಾಜ ಮ್ಯಾಗೋಟಿ, ಫಕೀರ ಸಂಗೋಜಿ, ವಿಠ್ಠಲ್ ಮಲ್ಲಾರಿ, ಶಿವರಾಯಿ ಸಾಳುಂಕೆ, ವಿನೋದ ಚವ್ಹಾಣ, ಅಶೋಕ ಸಾಳುಂಕೆ, ಸದಾಶಿವ ಧರ್ಮೋಜಿ, ಸುರೇಶ ಕಿತ್ತೂರ, ಬಸವಣ್ಣಿ ಜಾನಕಿ, ನಾರಾಯಣ ಜಾನಕಿ ಸಿದರಾಮ ಮುಗಳಿ, ರಾಮ ಸಂಗೋಜಿ ಮುಂತಾದವರು ಉಪಸ್ಥಿತರಿದ್ದರು​.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button