Kannada NewsKarnataka NewsLatest

ಕಡಲ ತೀರದಲ್ಲಿ ಅಪರೂಪದ ಪ್ರಭೇದದ ಭಾರಿ ತಿಮಿಂಗಲದ ಕಳೆಬರ ಪತ್ತೆ

ಪ್ರಗತಿವಾಹಿನಿ ಸುದ್ದಿ, ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಭಾರೀ ಗಾತ್ರದ ಬಲೀನ್ ತಿಮಿಂಗಲದ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟ ತಿಮಿಂಗಲ 46 ಅಡಿ ಉದ್ದ 9 ಅಡಿ ಎತ್ತರವಿದೆ. ಜಾಗತಿಕ ಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಪರಿಗಣಿಸಲಾಗುವ ಬಲೀನ್ ಜಾತಿಯ ತಿಮಿಂಗಲಗಳು 102 ಅಡಿವರೆಗೂ ಬೆಳೆಯುತ್ತವೆ.

ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ತಿಮಿಂಗಲದ ಮೃತದೇಹ ದಂಡೆಯಲ್ಲಿ ಬಂದು ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಈ ತಿಮಿಂಗಲ ಮೃತಪಟ್ಟು ಹಲವು ದಿನಗಳಾಗಿದ್ದು ಅದರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರವೇ ಎಲ್ಲ ವಿವರಗಳು ತಿಳಿದುಬರಬೇಕಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button