Kannada NewsLatest

ಬಸವ ಜ್ಯೋತಿಗೆ ಚಾಲನೆ ನೀಡಿದ ಶಾಸಕ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವಗುರು, ಸಮಾನತೆಯ ಹರಿಕಾರ, ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯ ಹಾಗೂ ಅಕ್ಷಯ ತೃತೀಯ ಹಬ್ಬದ ನಿಮಿತ್ತ ಕಾಗವಾಡ ಪಟ್ಟಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಗವಾಡ ಮತಕ್ಷೇತ್ರದ  ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಅವರು ಭಾಗವಹಿಸಿ, ಎತ್ತುಗಳಿಗೆ ಪೂಜೆ ಸಲ್ಲಿಸಿ, ಸಿಹಿ ತಿನ್ನಿಸಿ, ಬಸವ ಜ್ಯೋತಿಗೆ ಚಾಲನೆ ನೀಡಿ ನಂತರ ಬಸವೇಶ್ವರ ಸರ್ಕಲ್ ಗೆ ಭೇಟಿನಿಡಿ ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.

ಬಸವೇಶ್ವರ ದೇವಸ್ಥಾನಕ್ಕೆ ಶಾಸಕರು ಭೇಟಿನಿಡಿ ಶ್ರೀ ಬಸವಣ್ಣ ದೇವರ ದರ್ಶನವನ್ನು ಪಡೆದು, ನಂತರ ಶ್ರೀ ಬಸವ ಯುವಕ ಮಂಡಳಿಯವರಿಗೆ ಅವರ ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ಸೌಂಡ್ ಸಿಸ್ಟಮ್ ವನ್ನು ನೀಡಿದರು. ಈ ಸಮಯದಲ್ಲಿ ಕಮಿಟಿಯವರು ಶಾಸಕರನ್ನು ಸತ್ಕರಿಸಿ ಅಭಿನಂದಿಸಿದರು.

Home add -Advt

ಈ ಸಮಯದಲ್ಲಿ ತಾಲೂಕಾಡಳಿತದ ಎಲ್ಲ ಇಲಾಖೆಯ ಅಧಿಕಾರಿಗಳು, ಎಲ್ಲ ಗ್ರಾಮದಿಂದ ಆಗಮಿಸಿದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಬಿಜೆಪಿ ನಾಯಕರೊಂದಿಗಿನ ಸಭೆ ದಿಢೀರ್ ರದ್ದು; ಕುತೂಹಲ ಮೂಡಿಸಿದ ಅಮಿತ್ ಶಾ ನಿಗೂಢ ನಡೆ

Related Articles

Back to top button