Latest

*ಇದು ಲಾಟರಿ ಸರ್ಕಾರ; ಫ್ರೀ ಫ್ರೀ ಎಂದವರು ಈಗೇಕೆ ಷರತ್ತು ಹಾಕುತ್ತಿದ್ದೀರಾ?; ಮಾಜಿ ಸಚಿವರ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಷರತ್ತು ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಅಶ್ವತ್ಥನಾರಾಯಣ, ಇದೊಂದು ಲಾಟರಿ ಸರ್ಕಾರ, ಲಾಟರಿಯಲ್ಲಿ ಬಂದು ಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ, ಎಲ್ಲರಿಗೂ ಉಚಿತ ಗ್ಯಾರಂಟಿ ಯೋಜನೆಗಳು ಎಂದು ಘೋಷಿಸಿ ಈಗ ಷರತ್ತುಗಳನ್ನು ವಿಧಿಸುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.

Home add -Advt

ಎಲ್ಲರಿಗೂ ಫ್ರೀ, ನನ್ನ ಹೆಂಡತಿಗೂ ಫ್ರೀ ಅಂತ ಸಿದ್ದರಾಮಯ್ಯ ಹೇಳಿದ್ದರು. ಶೋಭಕ್ಕ ನಿನಗೂ ಫ್ರೀ, ಸಿ.ಟಿ.ರವಿ ನಿನಗೂ ಫ್ರೀ ಅಂತ ಡಿ.ಕೆ.ಶಿವಕುಮಾರ್ ಹೇಳಿದ್ದರು. ಎಲ್ಲರಿಗೂ ಉಚಿತ ಎಂದು ಹೇಳಿದವರು ಈಗ ಕೊಡಲಿ ಬಿಡಿ ಎಂದು ಟಾಂಗ್ ನೀಡಿದರು.

https://pragati.taskdun.com/text-book-revisionbaraguru-ramachandrappa-committee-formationcm-siddaramaiah/

Related Articles

Back to top button