Kannada NewsLatest
ಉತ್ತರ ಕರ್ನಾಟಕಕ್ಕೆ 2 ಸ್ಥಾನ ಅಭಿವೃದ್ಧಿಯ ದೃಷ್ಟಿಯಿಂದ ಸಮಯೋಚಿತ -ಕವಟಗಿಮಠ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನರೇಂದ್ರ ಮೋದಿ ಸರಕಾರದಲ್ಲಿ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿರುವ ಕರ್ನಾಟಕದ ಸದಾನಂದ ಗೌಡ, ಸುರೇಶ ಅಂಗಡಿ ಹಾಗೂ ಪ್ರಹಲ್ಲಾದ ಜೋಶಿ ಅವರನ್ನು ಅಭಿನಂದಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉತ್ತರ ಕರ್ನಾಟಕದವರನ್ನೂ ಕೇಂದ್ರ ಸಚಿವ ಸಂಪುಟದಲ್ಲಿ ಪರಿಗಣಿಸಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಸಮಯೋಚಿತವೆನಿಸಿದೆ ಎಂದಿದ್ದಾರೆ.




