Belagavi NewsBelgaum NewsKannada NewsKarnataka NewsLatestPolitics

*BREAKING: ಡಿಸಿಸಿ ಬ್ಯಾಂಕ್ ಚುನಾವಣೆ: ಅಥಣಿ, ರಾಯಬಾಗ, ರಾಮದುರ್ಗ ಕ್ಷೇತ್ರದ ಫಲಿತಾಂಶ ಪ್ರಕಟ*

ಲಕ್ಷ್ಮಣ ಸವದಿ ಜಯಭೇರಿ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಚುನವಣಾ ಮತದಾನ ಮುಕ್ತಾಯವಾಗಿದ್ದು, ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೂರು ತಾಲೂಕುಗಳ ಫಲಿತಾಂಶ ಪ್ರಕಟವಾಗಿದೆ.

Home add -Advt

ಅಥಣಿ, ರಾಯಭಾಗ, ರಾಮದುರ್ಗ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಅಥಣಿ ತಾಲೂಕಿನಿಂದ ಶಾಸಕ ಲಕ್ಷ್ಮಣ ಸವದಿ ಜಯಭೇರಿ ಬಾರಿಸಿದ್ದಾರೆ. 119 ಮತಗಳ ಅಂತರದಿಂದ ಲಕ್ಷ್ಮಣ ಸವಿದಿ ಗೆಲುವು ಸಾಧಿಸಿದ್ದಾರೆ.

ರಾಮದುರ್ಗ ತಾಲೂಕಿನಿಂದ ಮಲ್ಲಣ್ಣ ಯಾದವಾಡ ಗೆಲುವು ಸಾಧಿಸಿದ್ದಾರೆ. ಇದೇ ವೇಳೆ ರಾಯಬಾಗ ತಾಲೂಕಿನ ಫಲಿತಾಂಶ ಪ್ರಕಟವಾಗಿದ್ದು, ಜಾರಕಿಹೊಳಿ ಪೆನಲ್ ನ ಅಪ್ಪಾಸಾಹೇಬ್ ಕುಲಗೋಡೆ ಗೆದ್ದು ಬೀಗಿದ್ದಾರೆ. 120 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

Related Articles

Back to top button