Kannada NewsLatestPolitics

*ಒಳ ಮೀಸಲಾತಿಗಾಗಿ ಆ‌. 16ರಂದು ವಿಶೇಷ ಸಭೆ: ಸಚಿವ ಎಚ್ ಕೆ ಪಾಟೀಲ್*

ಪ್ರಗತಿವಾಹಿನಿ ಸುದ್ದಿ: ಒಳ ಮೀಸಲಾತಿ ಕಲ್ಪಿಸುವ ಕುರಿತು ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಶೇಷ ಸಚಿವ ಸಂಪುಟ ಸಭೆಯನ್ನ ಆಯೋಜಿಸಲಾಗುತ್ತದೆ ಎಂದು ಸಚಿವ ಹೆಚ್ ಕೆ ಪಾಟೀಲ ಅವರು ಹೇಳಿದ್ದಾರೆ.

ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯ ಶಿಫಾರಸು ಜಾರಿ ವಿಚಾರವನ್ನು ಮುಂದೂಡಲಾಗಿದ್ದು, ಇದಕ್ಕಾಗಿಯೇ ಆಗಸ್ಟ್ 16ರಂದು ವಿಶೇಷ ಸಚಿವ ಸಂಪುಟ ಸಭೆಯನ್ನ ಮಾಡಲಾಗುತ್ತಿದೆ. ಇನ್ನು ಈ ಸಭೆಯಲ್ಲಿ ಒಳಮೀಸಲಾತಿ ವಿಚಾರವಾಗಿ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದು ಸಚಿವ ಹೆಚ್ ಕೆ ಪಾಟೀಳ್ ಹೇಳಿದ್ದಾರೆ.

Home add -Advt

ಇನ್ನು ಈಗಾಗಲೇ ನಾಗಮೋಹನ್‌ದಾಸ್ ಅವರು ಆರು ಶಿಫಾರಸುಗಳನ್ನು ಒಳಗೊಂಡ ಸುಮಾರು 1,765 ಪುಟಗಳ ವರದಿಯನ್ನು ಸಿಎಂ ಅವರಿಗೆ ಕಳೆದ ಸೋಮವಾರ ಸಲ್ಲಿಕೆ ಮಾಡಿದ್ದರು. ಈ ವರದಿಯನ್ನ ಇಂದು ಸಿಎಂ ಎಲ್ಲಾ ಸಚಿವರಿಗೆ ನೀಡಿದ್ದು ವರದಿಯನ್ನ ಚೆನಾಗಿ ಓದಿಕೊಂಡು ಬರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

Related Articles

Back to top button