Kannada NewsKarnataka NewsLatest

ಬೆಳಗಾವಿ: ತಮ್ಮನನ್ನು ಕಡಿದು ಕೊಲೆ ಮಾಡಿದಾತನಿಗೆ ಜೀವಾವಧಿ ಶಿಕ್ಷೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತಮ್ಮನನ್ನೇ ಕಡಿದು ಕೊಲೆ ಮಾಡಿದ ವ್ಯಕ್ತಿಗೆ ಗೋಕಾಕ ನ್ಯಾಯಾಲಯ  ಜೀವಾವಧಿ ಶಿಕ್ಷೆ ವಿಧಿಸಿದೆ.

ಘಟಪ್ರಭಾ ಪೊಲೀಸ್ ಠಾಣೆ (ಗುನ್ನಾ ನಂ-147/2020, ಕಲಂ-302 ಐಪಿಸಿ) ವ್ಯಾಪ್ತಿಯಲ್ಲಿ ನಡೆದ ಘಟನೆ ಇದು. ಭೀಮಪ್ಪ ರಾಮಪ್ಪ ದುರ್ಗಿ (ಸಾ: ಬಳೋಬಾಳ) ತನ್ನ ತಮ್ಮ ಬಸವರಾಜ ದುರ್ಗಿ ಈತನು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಸಂಶಯ ಗೊಂಡು ಮತ್ತು ಜಮೀನಲ್ಲಿ ಅವನಿಗೆ ಪಾಲು ಕೊಡಬೇಕಾಗುತ್ತದೆ ಎಂದು 28-06-2020 ರಂದು ಸಂಜೆ 5-30 ಗಂಟೆ ಸುಮಾರಿಗೆ  ಕುರುಪಿಯಿಂದ ಕಡಿದು ಕೊಲೆ ಮಾಡಿದ್ದ.

Home add -Advt

ಬಸವರಾಜ ಹಣಮಂತ ಜೋತೆನ್ನವರ ಬಳೋಬಾಳ ಎನ್ನುವವರು ನೀಡಿದ್ದ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

ಪ್ರಕರಣದಲ್ಲಿ  ಎಸ್ಪಿ ಹಾಗೂ ಹೆಚ್ಚುವರಿ ಎಸ್‌ಪಿ  ಮತ್ತು ಗೋಕಾಕ ಡಿಎಸ್ಪಿ  ಮಾರ್ಗದರ್ಶನದಲ್ಲಿ ತನಿಖಾಧಿಕಾರಿ, ಆರಕ್ಷಕ ವೃತ್ತ ನಿರೀಕ್ಷಕ ವಿ ಎಸ್ ಮುರನಾಳ  ಹಾಗೂ ಘಟಪ್ರಭಾ ಠಾಣಾ ಅಧಿಕಾರಿ ಎಚ್ ವಾಯ್, ಬಾಲದಂಡಿ  ಮತ್ತು ಘಟಪ್ರಭಾ ಠಾಣಾ ಸಿಬ್ಬಂದಿ ಆರೋಪಿಯನ್ನು ಪತ್ತೆ ಹಜ್ಜೆ ದೋಷಾರೋಪನ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಆಜಿಯೋಜಕ ರಾಜಮಹೇಂದ್ರ ಕಿರಣಗಿ ವಾದ ಮಂಡಿಸಿದ್ದರು.  ಗೋಕಾಕದ12 ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ  ಆನಂದಶೆಟ್ಟಿ  ಆರೋಪಿತರಾದ  ಭೀಮಪ್ಪಾ ರಾಮಪ್ಪ ದುರ್ಗಿ ಸಾ: ಬಳೋಬಾಳ ಇವನಿಗೆ ಕಲಂ 302 ಐಪಿಸಿ ಅಡಿಯಲ್ಲಿ ಜೀವಾವಧಿ ಜೈಲು ಶಿಕ್ಷೆ ಹಾಗೂ 1000/- ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಶ್ರೀಶೈಲಂನಲ್ಲಿ ಕನ್ನಡಿಗ ಭಕ್ತರು ಸಾವನ್ನಪ್ಪಿಲ್ಲ, ವದಂತಿಗಳನ್ನು ನಂಬಬೇಡಿ: ಕರ್ನೂಲ್ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ನೀಡಿರುವ ನಿಖರ ಮಾಹಿತಿ ಇಲ್ಲಿದೆ

Related Articles

Back to top button