Kannada NewsLatest
ನೂತನ ಸಚಿವ ಸುರೇಶ ಅಂಗಡಿಗೆ ಶುಭಾಷಯಗಳ ಮಹಾಪೂರ


ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.





