ಆಸ್ಟ್ರೇಲಿಯಾದಲ್ಲಿ ಭುವನೇಶ್ವರ ಕುಮಾರ್ ಏಗಾಡಬೇಕಾದೀತೇ: ವಸೀಂ ಅಕ್ರಂ ಏನೆನ್ನುತ್ತಾರೆ?
ಸೂರ್ಯಕುಮಾರ 'ಅತ್ಯಂತ ಅಪಾಯಕಾರಿ' ಎಂದ ಮಾಜಿ ವೇಗಿ
ಪ್ರಗತಿವಾಹಿನಿ ಸುದ್ದಿ, ಕರಾಚಿ: ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತದ ವೇಗಿ ಭುವನೇಶ್ವರ ಕುಮಾರ್ ಆಸ್ಟ್ರೇಲಿಯಾದಲ್ಲಿ ಏಗಾಡಬೇಕಾದ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಹೇಳಿದ್ದಾರೆ.
“ಅವರ ವೇಗದೊಂದಿಗೆ, ಚೆಂಡು ಸ್ವಿಂಗ್ ಆಗದಿದ್ದರೆ, ಭುವನೇಶ್ವರ ಬಹುಶಃ ಕಷ್ಟಪಡಬೇಕಾದೀತು ಎಂದಿರುವ ಅವರು, ನಿಸ್ಸಂದೇಹವಾಗಿ ಭುವನೇಶ್ವರ್ ತುಂಬ ಉತ್ತಮ ಬೌಲರ್. ಆದರೆ ಆಸ್ಟ್ರೇಲಿಯಾದಲ್ಲಿ ನಿಮಗೆ ವೇಗ ಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರನ್ನು ‘ಅತ್ಯಂತ ಅಪಾಯಕಾರಿ’ ಆಟಗಾರ ಎಂದು ವಾಸೀಂ ಬಣ್ಣಿಸಿದ್ದಾರೆ.
ಮಳೆಹಾನಿಗೆ ಸಂಬಂಧಿಸಿ ಡಿಸಿಗಳೊಂದಿಗೆ ವಿಡಿಯೊ ಕಾನ್ಛರೆನ್ಸ್ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ