Politics

*ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ: ಸಿ.ಟಿ.ರವಿ ಆರೋಪ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ವಕ್ಫ್ ಬೋರ್ಡ್ ರದ್ದು ಮಾಡಬೇಕು. ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂದು ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ನಾನು ಹಿಂದೆಯೇ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿದ್ದೆ. ಸಿದ್ದರಾಮಯ್ಯ ವರ್ತನೆ ಸಿದ್ರಾಮುಲ್ಲಾ ಖಾನ್ ರಂತಿದೆ ಎಂದು. ಸಿದ್ದರಾಮಯ್ಯ ಎರಡು ರೀತಿ ಆಕ್ಟ್ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೂಗಳ ವೋಟ್ ಬೇಕಾದರೆ ಸಿದ್ದರಾಮಯ್ಯ ಆಗುತ್ತಾರೆ. ಮುಸ್ಲಿಂರ ವೋಟ್ ಬೇಕಾದರೆ ಸಿದ್ರಾಮುಲ್ಲಾಖಾನ್ ಆಗುತ್ತಾರೆ. ವಕ್ಫ್ ಬೋರ್ಡ್ ಅಕ್ರಮದ ಹಿಂದೆ ಸಿದ್ದರಾಮಯ್ಯ ಅವರ ಕೈವಾಡ ಅಡಗಿದೆ ಎಂದು ಕಿಡಿಕಾರಿದರು.


Home add -Advt

Related Articles

Back to top button