Latest

*ವೀಕೆಂಡ್ ಟ್ರಿಪ್ ಗೆ ಹೋದವರ ಕಾರು ಭೀಕರ ಅಪಘಾತ: ಇಬ್ಬರು ಯುವಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ವೀಕೆಂಡ್ ಟ್ರಿಪ್ ಗೆಂದು ಹೋಗಿದ್ದವರ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಗೌಡಗೆರೆ ಗೇಟ್ ಬಳಿ ನಡೆದಿದೆ.

Home add -Advt

ಭುವನ್ (25) ಹಾಗೂ ಅನುಷ್ (26) ಮೃತ ಯುವಕರು. ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವೀಕೆಂಡ್ ಟ್ರಿಪ್ ಗಾಗಿ ಐವರು ಯುವಕರು ಧರ್ಮಸ್ಥಳ ಸೇರಿದಂತೆ ವಿವಿಧೆಡೆ ಪ್ರವಾಸಕ್ಕೆ ತೆರಳುತ್ತಿದ್ದರು, ಬೆಂಗಳೂರಿನಿಂದ ಕೇವಲ ಒಂದುವರೆಗಂಟೆಯಲ್ಲಿ ಚನ್ನರಾಯಪಟ್ಟಣ ತಲುಪಿದ್ದು, ಕಾರಿನ ವೇಗಕ್ಕೆ ಗೌಡಗೆರೆ ಗೇಟ್ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ.

ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button