Latest

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇಲೆ ಗರಂ ಆದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾರ್ಯಕ್ರಮದ ವೇದಿಕೆಯಲ್ಲಿಯೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮೇಲೆ ಸಿಎಂ ಬಸವರಾಜ್ ಬೊಮ್ಮಾಯಿ ಗರಂ ಆದ ಘಟನೆ ನಡೆದಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿರುವ ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡುತ್ತಿದ್ದ ವೇಳೆ ವೇದಿಕೆ ಮೇಲೆ ಕುಳಿತಿದ್ದ ಸಚಿವ ನಾಗೇಶ್, ಪಕ್ಕದಲ್ಲಿ ಕುಳಿತಿದ್ದವರ ಜೊತೆ ಮಾತನಾಡುತ್ತಿದ್ದರು. ಇದರಿಂದ ಸಿಟ್ಟಾದ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ.

Home add -Advt

ನಾಗೇಶ್, ನಿಮಗೆ ಮಾತನಾಡಬೇಕು ಎಂದಾದರೆ ಹೊರಗೆ ಹೋಗಿ ಮಾತನಾಡಿ ಎಂದು ಏರುಧ್ವನಿಯಲ್ಲಿ ಹೇಳಿದ್ದಾರೆ. ಒಮ್ಮೆಲೇ ತಬ್ಬಿಬ್ಬಾದ ಸಚಿವ ನಾಗೇಶ್, ಬಳಿಕ ಸಾವರಿಸಿಕೊಂಡು ಮೌನವಾಗಿ ಕುಳಿತ ಪ್ರಸಂಗ ನಡೆದಿದೆ.

ಮುರುಘಾಶ್ರೀ ಪೀಠತ್ಯಾಗ: ಪ್ರಭಾರ ಪೀಠಾಧ್ಯಕ್ಷರಾಗಿ ಬಸವಪ್ರಭುಶ್ರೀ ನೇಮಕ ನಿರ್ಧಾರ

https://pragati.taskdun.com/latest/murughashreepeethatyagabasavaprabhushree/

ಮೈಸೂರಿಗೆ ಬರುವ ಪ್ರವಾಸಿಗರು ತ್ರಿವೇಣಿ ಸಂಗಮಕ್ಕೆ ಬರುವಂತಾಗಲಿ -ಹುಕ್ಕೇರಿ ಶ್ರೀಗಳು

Related Articles

Back to top button