ಲಕ್ಷ್ಮಿ ಹೆಬ್ಬಾಳಕರ್ ಗೆ ಕ್ಷೇತ್ರವೇ ಮನೆ; ಕ್ಷೇತ್ರದ ಜನರೇ ಕುಟುಂಬ; ಪ್ರಾಣವನ್ನೇ ಪಣಕ್ಕಿಟ್ಟು ಜನರ ಸೇವೆ
https://youtu.be/GDhY-bP7ZPA
ಮೀಸಲಾತಿ, ಇನ್ ಫ್ಲ್ಯೂಯೆನ್ಸ್ ನಿಂದಲ್ಲ;
ಪ್ರಯತ್ನ, ಪ್ರತಿಭೆಯಿಂದ ಬೆಳೆದ ನಾಯಕಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಪ್ರಭಾವಿ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಜನ್ಮ ದಿನ ಇಂದು. ಲಕ್ಷ್ಮಿ ಹೆಬ್ಬಾಳಕರ್ ನಿಜವಾದ ಜನ್ಮ ದಿನ ಫೆಬ್ರವರಿ 14. ಆದರೆ ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಮತದಾರರಿಗೋಸ್ಕರ ಆಯ್ಕೆಯಾದ ದಿನವನ್ನೇ (ಮೇ 12) ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದಾರೆ.
ಮತದಾರರಿಗೋಸ್ಕರ ಜನ್ಮದಿನವನ್ನೇ ಬದಲಾಯಿಸಿಕೊಂಡಿದ್ದು ಇತಿಹಾಸದಲ್ಲೇ ಮೊದಲು. ಇದು ಕ್ಷೇತ್ರದ ಜನರಿಗೆ ಅವರು ನೀಡಿದ ಗೌರವ, ಪ್ರೀತಿ. ಪ್ರತಿಭಾವಂತರಿಗೆ, ಯೋಧರಿಗೆ ಸನ್ಮಾನ ಸೇರಿದಂತೆ ಹಲವಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಳ್ಳುವ ಸಂಪ್ರದಾಯ ಮಾಡಿಕೊಂಡು ಬಂದಿದ್ದಾರೆ.
ಆದರೆ, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಜನ್ಮದಿನಾಚರಣೆ ಸಾರ್ವಜನಿಕ ಕಾರ್ಯಕ್ರಮ ಮಾಡುತ್ತಿಲ್ಲ. ಕಷ್ಟದಲ್ಲಿರುವ ಕೆಲವರಿಗೆ ಪರಿಹಾರ ಧನ ವಿತರಣೆ, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರಿಗೆ ಅನ್ನ ನೀಡಿ, ಅವರ ಕಷ್ಟ ಸುಖ ವಿಚಾರಿಸುವ ಕೆಲಸವನ್ನು ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದಾರೆ.
ಕಳೆದ 2 ತಿಂಗಳಿನಿಂದಲೂ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ಷೇತ್ರದ ಜನರನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಲು ಕುಟುಂಬ ಸಮೇತ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಅಪ್ಪಳಿಸಿದಾಕ್ಷಣದಿಂದಲೂ ಮನೆಯಲ್ಲಿ ಕುಳಿತುಕೊಳ್ಳದೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರವನ್ನು ಸುತ್ತುತ್ತಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಮುಂಚೂಣಿ ಹೆಸರು
ಕರ್ನಾಟಕದ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಯಾವುದೇ ರಿಸರ್ವೇಶನ್, ಇನ್ ಪ್ಲ್ಯುಯೆನ್ಸ್ ಇಲ್ಲದೆ ಸ್ವ ಪ್ರಯತ್ನ, ಪ್ರತಿಭೆಯಿಂದಲೇ ಬೆಳೆದ ನಾಯಕಿ ಇವರು.
ಶಾಸಕಿಯಾಗುವುದಕ್ಕಿಂತ ಮೊದಲೇ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಹೇಗೆ ಕ್ರಿಯಾಶೀಲವಾಗಿ ಕೆಲಸ ಮಾಡಬಹುದು ಎನ್ನುವುದನ್ನು ತೋರ್ಪಡಿಸಿದ್ದಾರೆ. ಸಂಘಟನೆಗೊಂದು ಶಕ್ತಿ ತುಂಬಿದ್ದಾರೆ.
ಮೊದಲ ಬಾರಿಗೆ ಶಾಸಕರಾದರೂ ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೊಂದು ಪ್ರಭಾವಶಾಲಿಯಾಗಿ ಮಾತನಾಡಿ ಎಲ್ಲರ ಗಮನಸೆಳೆದಿದ್ದರು. ಅವರು ಕ್ಷೇತ್ರಕ್ಕೆ ತಂದ ಅಭಿವೃದ್ಧಿ ಯೋಜನೆಗಳನ್ನು ನೋಡಿ ಹಲವಾರು ಹಿರಿಯ ಶಾಸಕರೇ ದಂಗಾಗಿ ಹೋಗಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ತಾವು ಶಾಸಕರಾಗುವುದಕ್ಕಿಂತಲೂ ಮೊದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಕ್ಷೇತ್ರದ ಜನರ ಸೇವೆ ಮಾಡಲು ಆರಂಭಿಸಿದ್ದಾರೆ. ಒಬ್ಬ ಶಾಸಕ ಏನೆಲ್ಲ ಮಾಡಬಹುದೋ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಆಗಲೇ ಮಾಡಿಸಿದ್ದರು. ಶಾಸಕರಾದ ನಂತರವಂತೂ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ ಇಂಚಿಂಚೂ ಓಡಾಡಿ ಅಭಿವೃದ್ಧಿಯ ಸ್ಪರ್ಷ ನೀಡಿದ್ದಾರೆ.
ಕನಸು ಕೊಚ್ಚಿಹೋಗಲಿಲ್ಲ
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಲಕ್ಷ್ಮಿ ಹೆಬ್ಬಾಳಕರ್ ಯೋಜನಾಬದ್ಧವಾಗಿ ಕೆಲಸ ನಡೆಸುತ್ತಿದ್ದರು. ಆದರೆ ಕಳೆದ ಆಗಷ್ಟ್ ತಿಂಗಳಲ್ಲಿ ಅಪ್ಪಳಿಸಿದ ಪ್ರವಾಹದಿಂದಾಗಿ ಅಭಿವೃದ್ಧಿ ಕೆಲಸಗಳು ಕೊಚ್ಚಿಹೋದವು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಕನಸು ಮಾತ್ರ ಕೊಚ್ಚಿಹೋಗಲಿಲ್ಲ. ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಮುನ್ನುಗ್ಗಿದರು.
ಕರ್ನಾಟಕದ ಯಾವ್ಯಾವ ಇಲಾಖೆಗಳಿಂದ ಕ್ಷೇತ್ರಕ್ಕೆ ದುಡ್ಡು ತರಬಹುದೋ ಅವೆಲ್ಲವನ್ನೂ ತಂದರು. ಹಲವಾರು ಅನುಭವಿ ಶಾಸಕರಿಗೂ ಗೊತ್ತಿಲ್ಲದ ಇಲಾಖೆಗಳ ಯೋಜನೆಗಳನ್ನು ತಂದರು. 1250 ಕೋಟಿ ರೂ.ಗಳಷ್ಟು ಹಣವನ್ನು ತಂದು ಮತ್ತೆ ಕ್ಷೇತ್ರ ಕಟ್ಟುವ ಕೆಲಸ ಶುರು ಮಾಡಿದರು.
ಪ್ರಾಣವನ್ನೇ ಪಣಕ್ಕಿಟ್ಟರು
ಆದರೆ ಇದೀಗ ಮತ್ತೊಮ್ಮೆ ಅವರಿಗೆ ದೊಡ್ಡ ಆಘಾತ ಉಂಟಾಗುವಂತಾಯಿತು. ಕೊರೋನಾ ಹೆಮ್ಮಾರಿ ಅಪ್ಪಳಿಸಿ ಜನರು ನಲುಗುವಂತಾಯಿತು. ಕೊರೋನಾ ಇಡೀ ವಿಶ್ವಕ್ಕೇ ಬಂದ ಸಂಕಷ್ಟ.
ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಇದರಿಂದ ಪರದಾಡಬಾರದು, ಅವರ ಬದುಕಿಗೆ ಇದರಿಂದ ತೊಂದರೆಯಾಗಬಾರದೆಂದು ಲಕ್ಷ್ಮಿ ಹೆಬ್ಬಾಳಕರ್, ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ಮಗ ಮೃಣಾಲ್ ಹೆಬ್ಬಾಳಕರ್ ಮತ್ತು ಇಡೀ ಪರಿವಾರ, ಕಾರ್ಯಕರ್ತರ ಪಡೆ ಟೊಂಕಕಟ್ಟಿ ನಿಂತಿತು. ಜನರ ಕೊರೋನಾ ಸಂಕಷ್ಟದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಪೂರ್ಣ ಪರಿವಾರ ಭಾಗಿಯಾಯಿತು.
ಆರಂಭದಲ್ಲಿ ಜನರು ಹೇಗೆ ಎಚ್ಚರಿಕೆ ವಹಿಸಬೇಕೆನ್ನುವ ಕುರಿತು ಅರಿವು ಮೂಡಿಸುತ್ತ, ಅದಕ್ಕೆ ಅಗತ್ಯವಾದ ಸೆನಿಟೈಸರ್, ಮಾಸ್ಕ್ ಮತ್ತಿತರ ಸಾಮಗ್ರಿಗಳನ್ನು ವಿತರಿಸುವ, ಹಳ್ಳಿ ಹಳ್ಳಿಗಳಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡಿದರು. ನಂತರ ಪ್ರತಿ ಹಳ್ಳಿಗೆ ತರಕಾರಿ, ದಿನಸಿ ಸಾಮಗ್ರಿ, ಹಾಲುಗಳನ್ನು ಸರಬರಾಜು ಮಾಡಿದರು.
ನೀವು ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಸೇವೆಗೆ ನಾವಿದ್ದೇವೆ ಎಂದು ಯಾವುದೇ ಸಂಕಷ್ಟದಲ್ಲಿ ದಿನದ 24 ಗಂಟೆಯೂ ನಮ್ಮನ್ನು ಸಂಪರ್ಕಿಸಿ ಎಂದು ಧೈರ್ಯ ತುಂಬಿದರು. ನಿಮ್ಮ ಮನೆಮಗಳಾಗಿ ನಿಮ್ಮೊಂದಿಗಿದ್ದೇನೆ ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.
ಇದರ ಜೊತೆಗೆ, ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್ ಗಳು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಸತ್ಕರಿಸಿದ್ದಲ್ಲದೆ, ಪ್ರಶಂಸಾ ಪತ್ರವನ್ನೂ ನೀಡಿ ಗೌರವಿಸಿದ್ದಾರೆ.
ಒಂದು ಗುರಿ, ಎರಡು ಸಾಧನೆ
ಕ್ಷೇತ್ರದ ಬೆಳಗುಂದಿ ಮತ್ತು ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ಕಾಣಿಸಿಕೊಂಡಾಗ ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ಅಲ್ಲಿಗೆ ಧಾವಿಸಿದರು. ಅಧಿಕಾರಿಗಳ ತಂಡ ಒಯ್ದು ಅಲ್ಲಿ ಏನೇನಾಗಬೇಕೋ ಮಾಡಿಸಿದರು. ನಿರಂತರ ಸಭೆಗಳನ್ನು ನಡೆಸಿ, ಜನರೊಂದಿಗೆ ಚರ್ಚಿಸಿ, ಅವರ ಅಹವಾಲುಗಳನ್ನು ಆಲಿಸಿದರು. ಸರಕಾರ ಕಣ್ತೆರೆಯುವಂತೆ ಮಾಡಿದರು. ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆದುಕೊಂಡು ಹೋದರು.
https://youtu.be/rm9ODJ6zeS8
ಕೊರೋನಾ ಲಾಕ್ ಡೌನ್ ನಿಂದಾಗಿ ರೈತ ಬೆಳೆಗಾರರೂ ಸಂಕಷ್ಟಕ್ಕೊಳಗಾದರು. ಗ್ರಾಹಕರೂ ಕಷ್ಟಕ್ಕೀಡಾದರು. ಇದನ್ನು ಗಮನಿಸಿ ಇಬ್ಬರನ್ನೂ ಸಂಕಷ್ಟದಿಂದ ಪಾರು ಮಾಡಲು ಯೋಜನೆ ರೂಪಿಸಿದರು. ಸುಮಾರು 100 ಟನ್ ಗಳಿಗಿಂತ ಹೆಚ್ಚು ತರಕಾರಿಗಳನ್ನು ಸ್ಥಳೀಯ ಬೆಳೆಗಾರರಿಂದ ಖರೀದಿಸಿ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚಿದರು. ಇದರಿಂದಾಗಿ ಬಳೆಗಾರರೂ ಆರ್ಥಿಕ ನಷ್ಟದಿಂದ ಪಾರಾದರು, ಜನರಿಗೂ ಸುಲಭವಾಗಿ ತರಕಾರಿ ದೊರಕಿತು.
ಪೂರ್ಣ ಪರಿವಾರವೇ ಬಾಗಿ
ಚನ್ನರಾಜ, ಮೃಣಾಲ – ಬಲಗೈ, ಎಡಗೈ
https://pragati.taskdun.com/gallery/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ