Latest

ಕೊರೋನಾ: ಇಂದು ಮತ್ತೊಂದು ಮಹಾಸ್ಫೋಟ

ಬೆಳಗಾವಿಯಲ್ಲಿ 27, ರಾಜ್ಯದಲ್ಲಿ 1839

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಮತ್ತೊಂದು ಮಹಾಸ್ಫೋಟ ಸಂಭವಿಸಿದೆ. ಈವರೆಗಿನ ಎಲ್ಲ ದಾಖಲೆಗಳನ್ನು ಮೀರಿ ಇಂದು 1839 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬೆಂಗಳೂರಿನಲ್ಲಿ 1172 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಇಂದು 42 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ದಕ್ಷಿಣ ಕನ್ನಡದಲ್ಲಿ 75, ಬಳ್ಳಾರಿ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ ಮತ್ತು ವಿಜಯಪುರ 37, ಮಂಡ್. ಉತ್ತರ ಕನ್ನಡ 35, ಶಿವಮೊಗ್ಗ 31, ಹಾವೇರಿ 28,ಬೆಳಗಾವಿ 27 ಜನರಿಗೆ ಸೋಂಕು ಪತ್ತೆಯಾಗಿದೆ.

ಹಾಸನ 25, ಉಡುಪಿ 18, ಚಿಕ್ಬಳ್ಳಾಪರು, ತುಮಕೂರು 12, ಬೆಂಗಳೂರು ಗ್ರಾಮಾಂತರ, ಕೋಲಾರ 11, ದಾವಣಗೆರೆ 7, ಚಾಮರಾಜ ನಗರ 5, ಗದಗ 4, ಕೊಪ್ಪಳ, ಚಿಕ್ಕಮಗಳೂರು 3, ರಾಮನಗರ 2, ಯಾಗಿರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

Home add -Advt

ರಾಜ್ಯದಲ್ಲಿ ಈವರೆಗೆ ಒಟ್ಟೂ 21,549 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 335 ಜನರು ಸಾವಿಗೀಡಾಗಿದ್ದಾರೆ.

ಆರಂಭದಲ್ಲಿ 2-3 ಪುಟದಲ್ಲಿ ಬರುತ್ತಿದ್ದ ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟಿನ್ ಇಂದು 83 ಪುಟಗಳಲ್ಲಿದೆ.

Related Articles

Back to top button