Film & EntertainmentKannada NewsKarnataka News

*ನಟ ದರ್ಶನ ಹಾಗೂ ಸಹಚರರ ನ್ಯಾಯಾಂಗ ಬಂಧನದ ಅವಧಿ ಇಂದು ಮುಕ್ತಾಯ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಗಿರುವ ನಟ ದರ್ಶನ್ ಮತ್ತು ಸಹಚರರ ನ್ಯಾಯಾಂಗ ಬಂಧನದ ಅವಧಿ ಗುರುವಾರಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಇಂದು ಪೊಲೀಸರು ಮತ್ತೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನ ವಿಸ್ತರಣೆಗೆ ಮನವಿ ಸಲ್ಲಿಸುವ ಸಾಧ್ಯತೆಯಿದೆ.

ಈ ದಿನದ ಪ್ರಕ್ರಿಯೆಯನ್ನು ವಿಡಿಯೋ ಕಾನ್ವರೆನ್ಸ್ ಮೂಲಕ ನಡೆಸಲು ಪೊಲೀಸರು ನಿರ್ಧರಿಸಿದ್ದು, ದರ್ಶನ್ ಮತ್ತು ತಂಡದ ವಿಚಾರಣೆ ಪರಪ್ಪನ ಅಗ್ರಹಾರದಲ್ಲಿಯೇ ನಡೆಯಲಿದೆ.

Home add -Advt

ಇದೇ ವೇಳೆ ಜೈಲೂಟದಿಂದ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಮನೆಯ ಊಟ ನೀಡುವಂತೆ ಅನುಮತಿ ಕೋರಿ ನಟ ದರ್ಶನ್ ವಕೀಲರು ಸಲ್ಲಿಸಿರುವ ಮನವಿಯೂ ಸಹ ವಿಚಾರಣೆಗೆ ಬರಲಿದೆ. ಕಳೆದ ಬಾರಿ ಈ ಪ್ರಸ್ತಾಪವನ್ನು ಪರಿಶೀಲಿಸಿದ್ದ ನ್ಯಾಯಾಲಯ ಈ ಬಗ್ಗೆ ಎಲ್ಲಾ ಕೈದಿಗಳಿಗೂ ಜೈಲು ನಿಯಮ ಏನು ಹೇಳುತ್ತದೆಯೋ ಅದೇ ನಿಯಮವನ್ನು ದರ್ಶನ್ ಗೂ ಅನ್ವಯಿಸಿ. ಯಾವುದೇ ವಿನಾಯಿತಿ ಬೇಡ ಎಂದಿತ್ತು.‌

Related Articles

Back to top button