Kannada NewsKarnataka NewsLatest
ಇತ್ತೀಚೆಗೆ ಖರೀದಿಸಿದ್ದ ಬೈಕ್ ಬೆಂಕಿಗಾಹುತಿ

ಪ್ರಗತಿವಾಹಿನಿ ಸುದ್ದಿ, ಮುಗಳಖೋಡ – ರಾಯಬಾಗ ತಾಲೂಕು ಸುಲ್ತಾನಪುರ ಗ್ರಾಮದಲ್ಲಿ ಇತ್ತೀಚೆಗೆ ಖರೀದಿಸಿದ್ದ ಬೈಕ್ ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಕರಕಲಾಗಿದೆ.
ಗ್ರಾಮದ ದುಡಪ್ಪ ಲಟ್ಟಿ ಎನ್ನುವವರು ಸುಮಾರು ಒಂದೂವರೆ ತಿಂಗಳ ಹಿಂದೆ 81 ಸಾವಿರ ರೂ. ಕೊಟ್ಟು ಚಾರ್ಜರ್ ಬೈಕ್ ಖರೀದಿಸಿದ್ದರು.
ಆದರೆ ಇಂದು ಸಂಜೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ನಿಖರ ಕಾರಣ ಗೊತ್ತಾಗಿಲ್ಲ.




