Kannada NewsKarnataka NewsLatest
ಬೆಂಗಳೂರಿನಲ್ಲಿ ಇಡಿ ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಇಡಿ ಅಧಿಕಾರಿಗಳಿಂದ ಬೆಂಗಳಊರಿನ ಎಂಟು ಕಡೆ ದಾಳಿ ನಡೆದಿದೆ.
ಮನಿ ಲಾಂಡ್ರಿಂಗ್ ನಡೆದಿರೋ ಮಾಹಿತಿ ಮೇರೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. 29ನೇ ತಾರೀಖು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಒಂದಷ್ಟು ದಾಖಲೆಗಳನ್ನ ವಶಪಡಿಸಿಕೊಂಡಿದ್ದರು.
ಇಂದು ಮತ್ತೆ 8 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿ ವಿಜಯ್ ತಾತಾ ಮತ್ತು ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ.
ಆರೋಪಿಗಳ ಅಕೌಂಟ್ ನಲ್ಲಿದ್ದ ಸುಮಾರು 11.25ಕೋಟಿ ಹಣ ಸೀಜ್ ಮಾಡಲಾಗಿದೆ. ಅಲ್ಲದೇ 120 ಕೋಟಿ ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಸೀಜ್ ಮಾಡಲಾಗಿದೆ.