Belagavi NewsBelgaum NewsKannada NewsNational
ವಿದ್ಯುತ್ ತಗುಲಿ ಮೂವರ ಸಾವು, ಮತ್ತೋರ್ವ ಗಂಭೀರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರ ದ ಮಿರಜ್ ತಾಲೂಕಿನ ಮೈಶಾಳ ಗ್ರಾಮದಲ್ಲಿ ವಿದ್ಯುತ್ ತಗುಲಿ ಮಗ, ತಂದೆ ಸೇರಿ ಮೂವರು ಸಾವನಪ್ಪಿದ್ದು ಓರ್ವ ಗಂಭೀರ ಗಾಯಗೊಂಡಿದ್ದಾನೆ.
ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಪ್ರದೀಪ ಶ್ರೀಕೃಷ ವನಮೋರೆ (34) ಶಾಹೀರಾಜ ವನಮೋರೆ (12) ಪಾರಸನಾಥ ವನಮೋರೆ (40) ಮೃತ ದುರ್ದೈವಿಗಳಾಗಿದ್ದು, ಹೇಮಂತ ವನಮೋರೆ ಗಂಭೀರ ಗಾಯಗೊಂಡಿದ್ದಾನೆ, ಆತನನ್ನು ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದೆ.
ಗದ್ದೆಯಲ್ಲಿ ನೀರು ಹಾಯಿಸಲು ಹೋದಾಗ ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ಮೂವರಿಗೆ ವಿದ್ಯುತ್ ತಗಿಲಿ ಸ್ಥಳದಲ್ಲೇ ಸಾವನಪ್ಪಿದ್ದಾರೆ.



