Kannada NewsKarnataka News
ರಸ್ತೆ, ಚರಂಡಿ ಕಾಮಗಾರಿಗೆ ಅಭಯ ಪಾಟೀಲ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೆ ಗಲ್ಲಿ, ಹುಲಬತ್ತಿ ಕಾಲನಿಗಳಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ಕೋರೆ ಗಲ್ಲಿ ಪ್ರದೇಶಗಳಲ್ಲಿ ಹಾಳಾದ ಒಳಚರಂಡಿಗಳು, ಸ್ವಚ್ಛತೆ ಕೊರತೆಯಿಂದ ಜನರು ಸಂಕಷ್ಟ ಪಡುತ್ತಿದ್ದರು. ಹಲವರು ಡೆಂಗ್ಯೂ, ಚಿರೂನ್ ಗುನ್ಯಾದಂತ ರೋಗಗಳಿಗೆ ತುತ್ತಾಗಿದ್ದಾರೆ. ಜನರು ಹಲವು ವರ್ಷದಿಂದ ಒತ್ತಾಯಿಸುತ್ತಿದ್ದರೂ ಯಾರೂ ಈ ಬಗ್ಗೆ ಗಮನ ನೀಡಿರಲಿಲ್ಲ.
ಇದೀಗ ಶಾಸಕ ಅಭಯ ಪಾಟೀಲ ಈ ಭಾಗದ ಚರಂಡಿ ಹಾಗೂ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.




