ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಕರ್ನಾಟಕದಲ್ಲಿ ನಡೆದಿರುವ ಬಹುಕೋಟಿ ಐಎಂಎ ಜುವೆಲರ್ಸ್ ಹಗರಣದ ಕುರಿತು ಕೇಂದ್ರ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಗರಣದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳೂ ಪಾಲುದಾರರಾಗಿರುವ ಶಂಕೆ ಇದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಶೋಭಾ ಕರಂದ್ಲಾಚೆ, ಜಿ.ಎಂ.ಸಿದ್ದೇಶ, ಪ್ರತಾಪ ಸಿಂಹ, ತೇಜಸ್ವಿ ಸೂರ್ಯ ಮೊದಲಾದವರಿದ್ದರು.