Kannada NewsKarnataka NewsLatest

*ನಿಗೂಢ ಸ್ಫೋಟದಲ್ಲಿ ಗಾಯಗೊಂಡಿದ್ದ ದಂಪತಿ ಸಾವು: ಅನಾಥವಾದ ಕಂದಮ್ಮ*

ಪ್ರಗತಿವಾಹಿನಿ ಸುದ್ದಿ: ಹಾಸನ ಜಿಲ್ಲೆಯ ಹಳೆ ಆಳೂರು ಪಟ್ಟಣದಲ್ಲಿ ಸಂಭವಿಸಿದ್ದ ನಿಗೂಢ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಸೋಮವಾರ ರಾತ್ರಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸುದರ್ಶನ್ (32) ಹಾಗೂ ಪತ್ನಿ ಕಾವ್ಯಾ (27) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 14 ತಿಂಗಳ ಮಗು ಅನಾಥವಾಗಿದೆ.

Home add -Advt

ಸುದರ್ಶನ್ ಅವರ ಹಳೇ ಆಳೂರು ಪಟ್ಟಣದ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಆರಂಭದಲ್ಲಿ ಸಿಲಿಂಡರ್ ಸ್ಫೋಟಗೊಂಡು ಅವಘಡ ಎನ್ನಲಾಗಿತ್ತು. ಆದರೆ ಯಾವುದೇ ಸಿಲಿಂಡರ್ ಲೀಕ್ ಆಗಿ ಸ್ಫೋಟ ಸಂಭವಿಸಿಲ್ಲ ಎನ್ನಲಾಗಿದೆ. ಘಟನೆಯಲ್ಲಿ ದಂಪತಿ ಹಾಗೂ ಮಗು ಗಂಭೀವಾಗಿ ಗಾಯಗೊಂಡಿದ್ದರು. ಇದೀಗ ದಂಪತಿ ಸಾವನ್ನಪ್ಪಿದ್ದಾರೆ.

https://pragativahini.com/mallikarjun-kharge-admitted-to-hospital-due-to-breathing-prob

Related Articles

Back to top button