Kannada NewsLatest

ಹೆಸ್ಕಾಂನಿಂದ 5 ಲಕ್ಷ ರೂ. ಪರಿಹಾರ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ:  
ಯರಗಟ್ಟಿ ಸಮೀಪದ ಸೊಪ್ಪಡ್ಲ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿದ ಚಂದ್ರಪ್ಪ ಶಿವಪ್ಪ ಕೌಜಲಗಿ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರವೇ ಸಂಘಟನೆಗಳ ಸಮ್ಮುಖದಲ್ಲಿ ಹೆಸ್ಕಾ ಅಧಿಕಾರಿ ಸಿಎಸ್.ಮಠಪತಿ 5 ಲಕ್ಷ ರೂಗಳ ಚೆಕ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗೂಳಪ್ಪ ಬಾವಿಕಟ್ಟಿ, ಸವದತ್ತಿ ತಾಲೂಕಾ ಅಧ್ಯಕ್ಷ ಬಸವರಾಜ ಬಿಜ್ಜೂರ, ತಾಲೂಕಾ ಘಟಕಾಧ್ಯಕ್ಷ ಪ್ರವೀಣ ಪಟಾತಾರ, ಕರವೇ ಅಧ್ಯಕ್ಷ ಡಿ.ಕೆ.ರಪೀಕ್, ಮಂಜುನಾಥ ಬಸಳಿಗುಂದಿ, ಹನಮಂತ ಬಿಟ್ಟಿ, ಹುಸೇನ್ ಇಮ್ಮನ್ನವರ, ರಾಜು ಪಾಟೀಲ, ಶಿವಾನಂದ ದೊಡವಾಡ ಶಿವಾನಂದ ಹಿರೇಮಠ ಇನ್ನಿತರು ಉಪಸ್ಥಿತರಿದ್ದರು.

Home add -Advt

Related Articles

Back to top button