Kannada NewsLatest

ಚಿಕ್ಕೋಡಿ: ಮದುವೆಗೆ ಹೆಣ್ಣು ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರಗುಪ್ಪಿಯಲ್ಲಿ ನಡೆದಿದೆ.

ರಮೇಶ್ ಬಾಳಪ್ಪ ಪಾಟೀಲ್ (25) ಆತ್ಮಹತ್ಯೆಗೆ ಶರಣಾದ ಯುವಕ. ರಮೇಶ್ ಬಾಳಪ್ಪನ ಇಬ್ಬರು ಸಹೋದರರಿಗೆ ಮನೆಯವರು ಹಲವು ವರ್ಷಗಳಿಂದ ಮದುವೆಗೆ ಹುಡುಗಿ ಹುಡುಕಿದರೂ ಸಿಕಿರಲಿಲ್ಲ. ರಮೇಶ್ ಗೂ ಕೂಡ ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಆದರೆ ಎಲ್ಲಿಯೂ ಕೂಡಿ ಬಂದಿರಲಿಲ್ಲ.

Home add -Advt

ಮದುವೆ ಆಗಲಿಲ್ಲ ಎಂದು ಖಿನ್ನತೆಗೆ ಒಳಗಾದ ಯುವಕ ರಮೇಶ್ ಇದೀಗ ತಮ್ಮದೇ ತೋಟದಲ್ಲಿ ಮಾವಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button