Latest

8 ವರ್ಷದ ಬಾಲಕನ ಅಪಹರಣ: 17 ಕೋಟಿ ರೂ.ಗೆ ಬೇಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಉಜಿರೆಯ 8 ವರ್ಷದ ಬಾಲಕ ಅನುಭವ್ ಅಪಹರಣ ಪ್ರಕರಣ ಪೊಲೀಸರಿಗೆ ಕಗ್ಗಂಟಾಗಿದೆ.

ಚಾರ್ಮಾಡಿ ಅರಣ್ಯ ಪ್ರದೇಶಕ್ಕೆ ಬಾಲಕನನ್ನು ಒಯ್ದು ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಪಹರಣಕಾರರು ಬಾಲಕನ ತಂದೆ ಉದ್ಯಮಿ ಬಿಜೋಯ್ ಗೆ ಕರೆ ಮಾಡಿ 17 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.

ಹಳದಿ ನಂಬರ್ ಪ್ಲೇಟ್ ಹೊಂದಿರುವ ಇಂಡಿಕಾ ಕಾರಿನಲ್ಲಿ ಅಪಹರಣ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಎಲ್ಲ ಕಡೆ ನಾಕಾ ಬಂದಿ ಮಾಡಲಾಗಿದೆ. ಹಳೆಯ ದ್ವೇಷದಿಂದ ಈ ಅಪಹರಣ ನಡೆದಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ.

Home add -Advt

Related Articles

Back to top button