Kannada NewsKarnataka NewsLatest

*ಕೌಜಲಗಿ ರಾಜಮಾತೆ ಸುಶೀಲಾವರ್ಮ ಅಂಬರಿಶವರ್ಮ ದೇಸಾಯಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿ ದೇಸಾಯಿ ಸoಸ್ಥಾನದ ಕೊನೆಯ ಕೊಂಡಿ ರಾಜಮಾತೆ ಸುಶೀಲಾವರ್ಮ ಅಂಬರಿಶವರ್ಮ ದೇಸಾಯಿ ಅವರು ಇಂದು ನಿಧನ ಹೊಂದಿದ್ದಾರೆ ಅವರಿಗೆ(95) ವಯಸ್ಸಾಗಿತ್ತು.

ಶ್ರೀಮಂತ ಸರದಾರ ಭೀಮಪ್ಪಗಿ ದೇಸಾಯಿ ಇವರ ಹಿರಿಯ ಸೊಸೆಯಾಗಿದ್ದ ಸುಶೀಲಾವರ್ಮ ಅವರು ದೈವಪುರುಷ ಅಂಬರಿಶವರ್ಮ ಬೀ ದೇಸಾಯಿ ಅವರ ಧರ್ಮಪತ್ನಿಯಾಗಿದ್ದರು.

ಆದ್ಯಾತ್ಮ- ಶಿಕ್ಷಣ ಕ್ಷೇತ್ರಗಳ ಮುಖಾಂತರ ಅವರು ಸಮಾಜಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡಿದ್ದಾರೆ. ಕಕ್ಕೇರಿ ಬಿಷ್ಟಮ್ಮ , ಕುಲಗೋಡ ಮತ್ತು ಕೌಜಲಗಿ ಶ್ರೀಬಲಭೀಮ ದೇವರುಗಳ ಸಂಸ್ಥಾನದ ಆರಾಧ್ಯ ದೈವವೇನಿಸಿದೆ. ಮೃತರು ಸಂಸ್ಥಾನದ ಪರಂಪರೆಗಳನ್ನು ಮುನ್ನೆಡೆಯಿಸಿಕೊಂಡು ಬಂದಿದ್ದರು.

ಬೆಂಗಳೂರಿನಲ್ಲಿ ವಿಶ್ವಮೈತ್ರಿ ಸಂಸ್ಥೆಯನ್ನು ಮುನ್ನೆಡೆಯಿಸಿಕೊಂಡು ಬಂದಿದ್ದರು. 2017 ರಲ್ಲಿ ಕೌಜಲಗಿ ರಾಜವಾಡೆಯಲ್ಲಿ ಶ್ರೀಮಂತ ಸರದಾರ ಭೀ.ಗಿ. ದೇಸಾಯಿ ಅವರ ಪ್ರತಿಮೆಯನ್ನು ಸ್ಥಾಪಿಸಿ ಲೋಕಾರ್ಪಣೆಗೋಳಿದ್ದರು.

Home add -Advt

Related Articles

Back to top button