Belagavi NewsBelgaum NewsNational

*ಮಹಾರಾಷ್ಟ್ರದಲ್ಲಿ KSRTC ಬಸ್ ಮೇಲೆ ಕಲ್ಲುತೂರಾಟ*

ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್,ಟಿ.ಸಿ ಬಸ್ ಮೇಲೆ ಪುಂಡರು ಕಲ್ಲುತೂರಾಟ ನಡೆಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ನಡೆದಿದೆ.

ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಹೋಳಿ ಬಣ್ಣ ಎರಚುವ ವೇಳೆ ಇತರ ವಾಹನಗಳ ಮೇಲೆ ಮಸಿ ಎರಚಿ ಬಳಿಕ ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

Home add -Advt

ಬಸ್ ನ ಹಿಂಬದಿ ಗಾಜು ಸಂಪೂರ್ಣ ಪುಡಿಪುಡಿಯಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಬಸ್ ಬೆಳಗಾವಿಯ ರಾಯಬಾಗ ಡಿಪೋಗೆ ಸೇರಿದ್ದಾಗಿದೆ.

ಮಹಾರಾಷ್ಟ್ರದ 6 ಬಸ್ ಗಳ ಮೇಲೂ ಕಲ್ಲು ತೂರಲಾಗಿದೆ. ಭಾಷಾ ವಿವಾದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ 20 ಜನರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

Related Articles

Back to top button