Latest

*ಬಿಜೆಪಿಯಿಂದ ಮಾದರಿ ಪ್ರಣಾಳಿಕೆ ಸಿದ್ಧತೆ; ಮಹತ್ವದ ಅಂಶಗಳ ಬಗ್ಗೆ ಸುಳಿವು ನೀಡಿದ ಸಚಿವ ಸುಧಾಕರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನವಣೆಗೆ ದಿನಗಣನೆ ಆರಂಭವಾಗಿದ್ದು, ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಅಂತಿಮ ಹಂತದ ಸಭೆಗಳನ್ನು ನಡೆಸಲಾಗುತ್ತಿದ್ದು, ಇಂದು ಅಥಾವಾ ನಾಳೆ ಪಟ್ಟಿ ಬಿಡಿಗಡೆಯಾಗಲಿದೆ. ಈ ನಡುವೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೂ ತಯಾರಿ ನಡೆಸಲಾಗಿದೆ.

ಚುನಾವಣಾ ಪ್ರಣಾಳಿಕೆ ಸೈತಿ ಸದಸ್ಯರೂ ಆಗಿರುವ ಸಚಿವ ಡಾ.ಸುಧಾಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಚುನಾವಣೆ ಪ್ರಣಾಳಿಕೆ ಸಿದ್ಧತೆ ನಿಟ್ಟಿನಲ್ಲಿ ವಿಭಾಗ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಸಭೆ ನಡೆದಿದೆ. ವಾರದೊಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದೆ ಎಂದರು.

Home add -Advt

ಬಿಜೆಪಿ ಪ್ರಣಾಳಿಕೆ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿರಲಿದೆ. ಹೊಸತನ, ಜನರ ಬದುಕು ಕಟ್ಟಿಕೊಡುವ ಅಂಶಗಳು ಪ್ರಣಾಳಿಕೆ ಒಳಗೊಂಡಿರಲಿದೆ. ಅಂಗೈನಲ್ಲಿ ಚಂದ್ರನನ್ನು ತೋರಿಸುವ ಕೆಲಸವನ್ನು ಬಿಜೆಪಿ ಮಾಡಲ್ಲ. ನಮ್ಮ ಆರ್ಥಿಕ ಪರಿಸ್ಥಿತಿ, ಶಕ್ತಿ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧವಾಗಲಿದೆ. ರಾಮ ರಾಜ್ಯ ಪರಿಕಲ್ಪನೆಗೆ ಪೂರಕವಾದ ಅಂಶಗಳು ಇರಲುವೆ. ಗ್ರೇಟರ್ ಬೆಂಗಳೂರು, ಕಲ್ಯಾಣ ಕರ್ನಾಟಕ, ಕಿತ್ತೂರು, ಬಯಲುಸೀಮೆ ಹೀಗೆ ವಲಯವಾರು ಪ್ರಣಾಳಿಕೆ ಕೂಡ ಬಿಡುಗಡೆಯಾಗಲಿದೆ ಎಂದು ಹೇಳಿದರು.

https://pragati.taskdun.com/vidhanasabha-electionbjp-candidate-listcm-basavaraj-bommaireaction/

Related Articles

Back to top button