Latest

ಸುದ್ದಿ ಮೂಲ ಹುಡುಕಬಾರದು ಎಂದ ಸಿ.ಟಿ ರವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪ್ರಭಾವಿ ರಾಜಕೀಯ ನಾಯಕರ ಹಸ್ತಕ್ಷೇಪವಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ನದಿ ಮೂಲ, ಋಷಿ ಮೂಲದಂತೆಯೇ ಸುದ್ದಿ ಮೂಲಗಳನ್ನು ಕೂಡ ಹುಡುಕಬಾರದು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಮೂಲಗಳನ್ನು ಹುಡುಕಬಾರದು. ಅಂತೆಯೇ ಸುದ್ದಿ ಮೂಲವನ್ನೂ ಹುಡುಕಬಾರದು. ಸುದ್ದಿಗಳಿಗೆ ಸತ್ವವಿಲ್ಲ ಎಂದರೆ ಬಹಳ ಕಾಲ ಇರುವುದಿಲ್ಲ. ಹಲವು ಅನಧಿಕೃತ ಸುದ್ದಿಗಳು ಪ್ರಸಾರವಾಗುತ್ತಿರುತ್ತವೆ. ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ. ಅಧಿಕೃತವಾಗಿ ಸುದ್ದಿಗಳು ಬಂದರೆ ಆ ಬಗ್ಗೆ ಪ್ರತಿಕ್ರಿಯೆ ನೀಡಬಹುದು ಎಂದುರು.

Home add -Advt

ಇನ್ನು ಮೊದಲೇ ನಿರ್ಧರಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಂದಿನ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು ಎಂದು ಹೇಳಿದರು.

Related Articles

Back to top button