Kannada NewsKarnataka NewsLatest
*ಭೀಕರ ರಸ್ತೆ ಅಪಘಾತ; ವಕೀಲ ಸ್ಥಳದಲ್ಲೇ ದುರ್ಮರಣ*
![](https://pragativahini.com/wp-content/uploads/2022/07/Accident.jpg)
ಪ್ರಗತಿವಾಹಿನಿ ಸುದ್ದಿ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಕೀಲರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಮಂಗಲದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ದಾಬಸ್ ಪೇಟೆ ಬಳಿ ಈ ದುರಂತ ಸಂಭವಿಸಿದೆ. ತುಮಕೂರಿನ ದಿಬ್ಬೂರಿನ ಗೋವಿಂದರಾಜು (48) ಮೃತ ದುರ್ದೈವಿ. ಅಪಘಾತದ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.