Kannada NewsKarnataka NewsLatest

ಬೋಟ್ ಮೂಲಕ 17 ಕುಟುಂಬ ಹೊರತಂದ ಶಾಸಕ ಅಭಯ ಪಾಟೀಲ

ಬೋಟ್ ಮೂಲಕ 17 ಕುಟುಂಬ ಹೊರತಂದ ಶಾಸಕ ಅಭಯ ಪಾಟೀಲ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ನಗರದಲ್ಲಿ ಪ್ರವಾಹ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ವಿಕೋಪಕ್ಕೆ ಹೋಗುತ್ತಿದೆ. ನಗರದ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ ಮತ್ತು ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪ್ರವಾಹ ಸಂತ್ರಸ್ತರ ನೆರವಿಗಾಗಿ ಹಗಲು-ರಾತ್ರಿ ಕಾರ್ಯಾಚರಣೆಗಿಳಿದಿದ್ದಾರೆ. ಅಧಿಕಾರಿಗಳ ತಂಡವೂ ಬೆನ್ನಿಗಿದೆ.

ಆದರೆ ಮಳೆ ಕಡಿಮೆಯಾಗದಿರುವದುರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಬೆಳಗ್ಗೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಮತ್ತು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು 2 ಬೋಟ್ ಬಳಸಿ 17 ಕುಟುಂಬಗಳನ್ನು ಹೊರಗೆ ತಂದಿದ್ದಾರೆ.

ನಗರದಲ್ಲಿ ವಿದ್ಯುತ್ ಸಮಸ್ಯೆ ಕೂಡ ತೀವ್ರವಾಗಿದೆ. ಹಲವೆಡೆ ಮರ, ಗಿಡಗಳು ಬಿದ್ದು ಸಮಸ್ಯೆಯಾದರೆ ಕೆಲವೆಡೆ ವಿದ್ಯುತ್ ಪರಿವರ್ತಕಗಳು, ಮೀಟರ್ ಗಳು ನೀರಿನಲ್ಲಿ ಮುಳುಗಿವೆ. ಅವೇಕ ಕಡೆ ಅಪಾಯದ ಮುನ್ನೆಚ್ಚರಿಕೆಯಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button