Kannada NewsKarnataka NewsLatest

ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಬಂತು, ಕ್ಷಮಿಸಿ ಎಂದು ಪಾಲಿಕೆ ನಿವೃತ್ತ ನೌಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 33 ವರ್ಷ ಕನ್ನಡಿಗರ ಅನ್ನ ತಿಂದು ನಿವೃತ್ತಿಯ ದಿನ ಬಾಯ್ತಪ್ಪಿನಿಂದ ಜೈ ಮಹಾರಾಷ್ಟ್ರ ಬಂತು ಎಂದ ಬೆಳಗಾವಿ ಮಹಾನಗರ ಪಾಲಿಕೆಯ ನೌಕರ, ತನ್ನ ಅಕ್ಷಮ್ಯ ಅಪರಾಧಕ್ಕೆ ಕ್ಷಮೆ ಕೋರಿದ್ದಾನೆ.

ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರಿಗೆ ಲಿಖಿತ ಪತ್ರ ಕೊಟ್ಟಿದ್ದಾನೆ.

ಪಿಂಚಣಿ ತಡೆ ಹಿಡಿಯುವಂತೆ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಸಿ ಹತ್ತಿ ಕ್ಷಮಾಪಣೆ ಪತ್ರ ನೀಡಿರುವ ನಿವೃತ್ತ ನೌಕರ ಶಿವಾಜಿ ಕಳಸೇಕರ್, ನನಗೆ ಅರಿವಿಲ್ಲದೆ ಬಾಯ್ತಪ್ಪಿನಿಂದ ಹಾಗೆ ಬಂತು. ನನ್ನಿಂದಾಗಿ ಪಾಲಿಕೆಗೆ ಕೆಟ್ಟ ಹೆಸರು ಬರಬಹುದಾಗಿದ್ದು, ನನ್ನಿಂದ ಆದ ಪ್ರಮಾದಕ್ಕೆ ಕ್ಷಮೆ ನೀಡಬೇಕು ಎಂದು ಕೋರಿದ್ದಾನೆ.

 

Home add -Advt

33 ವರ್ಷ ಕನ್ನಡಿಗರ ಅನ್ನ ಉಂಡು ಕನ್ನಡಿಗರಿಗೇ ದ್ರೋಹ; ಬೆಳಗಾವಿ ಪಾಲಿಕೆ ನೌಕರನ ಪಿಂಚಣಿ ತಡೆ ಹಿಡಿಯಲು ಆಗ್ರಹ

Related Articles

Back to top button