Kannada NewsKarnataka NewsLatest

ವಿಕಲಚೇತನರ ಸಂಕಷ್ಟಕ್ಕೆ ನಿಯತಿ ಫೌಂಡೇಶನ್ ಸ್ಪಂದನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ ಡಾ. ಸೋನಾಲಿ ಸರ್ನೋಬತ್ ನೇತೃತ್ವದ ನಿಯತಿ ಫೌಂಡೇಶನ್ ಕೊರೋನಾ ಸಂಕಷ್ಟಕ್ಕೆ ಸ್ಪಂದಿಸುವ ಕಾಯಕವನ್ನು ಮುಂದುವರಿಸಿದೆ.

Home add -Advt

ಗುರುವಾರ ಡಾ.ಸೋನಾಲಿ ಸರ್ನೋಬತ್ ಹಾಗೂ ಭಾಗ್ಯಶ್ರೀ ಕೋಕಿತ್ಕರ್ ಜ್ಯೋತಿನಗರದ ವಿಕಲಚೇತನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.

ಜ್ಯೋತಿನಗರ ಅತ್ಯಂತ ಕೊಳಚೆ ಪ್ರದೇಶವಾಗಿದ್ದು, ಸ್ವಚ್ಛತೆ ಎನ್ನುವುದೇ ಕಾಣಸಿಗದಂತಿದೆ. ಇಲ್ಲಿ ಅನೇಕರು ನಡೆಯಲಾರದ ಸ್ಥಿತಿಯಲ್ಲಿದ್ದಾರೆ. ಅನೇಕರು ವಿವಿಧ ರೀತಿಯ ದೈಹಿಕ ಊನತೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಇಲ್ಲಿ ಡಾ.ಸೋನಾಲಿ ಸರ್ನೋಬತ್ ಆರೋಗ್ಯ ಶಿಬಿರದ ಮೂಲಕ ಜಾಗೃತಿ ತರುವ ಪ್ರಯತ್ನ ಮಾಡಿದ್ದರು.

ಡಾ.ಸೋನಾಲಿ ಸರ್ನೋಬತ್

ಅಧಿಕಾರಿಗಳು ಜ್ಯೋತಿನಗರದ ಸಮಸ್ಯೆಯ ಕಡೆಗೆ ಗಮನಹರಿಸಬೇಕು. ಇಲ್ಲಿನ ಜನರ ಆರೋಗ್ಯ, ಜನರ ಜೀವನ ಮಟ್ಟ ಉನ್ನತಿಗೆ ಪ್ರಯತ್ನಿಸಬೇಕು

  • -ಡಾ.ಸೋನಾಲಿ ಸರ್ನೋಬತ್ 

Related Articles

Back to top button