Karnataka News

*KRS ಡ್ಯಾಮ್ ನಲ್ಲಿ ಅವಾಂತರ: ಏಕಾಏಕಿ ಗೇಟ್ ಓಪನ್*

ಪ್ರಗತಿವಾಹಿನಿ ಸುದ್ದಿ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯ(KRS)ದಲ್ಲಿ ಅವಾಂತರ ಸಂಭವಿಸಿದೆ. ಕೆಆರ್ ಎಸ್ ಡ್ಯಾಂ ಗೇಟ್ ಏಕಾಏಕಿ ಓಪನ್ ಆಗಿದ್ದು, ನೀರುಪೋಲಾಗಿದೆ.

Home add -Advt

ಬರೋಬ್ಬರಿ 24 ಗಂತೆಗಳ ಕಾಲ ಗೇಟ್ ಓಪನ್ ಆಗಿ ಜಲಾಸಯದಿಂದ ನೀರು ಹರಿದು ಹೋದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅನುಮಾನಕ್ಕೆ ಕಾರಣವಗಿದೆ. ಭಾನುವಾರ ರಾತ್ರಿ ಇದ್ದಕ್ಕಿದಂತೆ ಕೆ.ಆರ್.ಎಸ್ ಡ್ಯಾಂ +80 ಗೇಟ್ ಗಳು ತೆರೆದಿದ್ದು ಸೋಮವಾರ ರಾತ್ರಿ ಕಾವೇರಿ ನಿಗಮದ ಅದಿಕಾರಿಗಳು ಗೇಟ್ ಬಂದ್ ಮಾಡಿದ್ದಾರೆ. ಅಲ್ಲಿವರೆಗೆ ಬರೋಬ್ಬರಿ 2000 ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿದಿದೆ.

ಡ್ಯಾಮ್ ಗೇಟ್ ನ ಮೋಟರ್ ರಿವರ್ಸ್ ಆಗಿ ಗೇಟ್ ತೆರೆದಿರಬಹುದೇ? ಅಥವಾ ಸಿಬ್ಬಂದಿಗಳೇ ಗೇಟ್ ತೆರೆದಿದ್ದಾರೆಯೇ? ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಡ್ಯಾಂ ಗೇಟ್ ಓಪನ್ ಆಗಿದ್ದು ಹಲವು ಅನುಮಾನಕ್ಕೆ ಕಾರಣವಗಿದೆ.


Related Articles

Back to top button