Kannada NewsKarnataka NewsLatest

*ಪದ್ಮಲತಾ ಅಸಹಜ ಸಾವು ಪ್ರಕರಣ: ಮರುತನಿಖೆಗೆ ಒತ್ತಾಯ: ದೂರು ನೀಡಿದ ಸಹೋದರಿ*

ಪ್ರಗತಿವಾಹಿನಿ ಸುದ್ದಿ: ಪದ್ಮಲತಾ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸುವಂತೆ ಒತ್ತಾಯಿಸಿ ಮೃತ ಪದ್ಮಲತಾ ಸಹೋದರಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

38 ವರ್ಷಗಳ ಹಿಂದೆ ಅಂದರೆ 1986ರಲ್ಲಿ ಧರ್ಮಸ್ಥಳದಲ್ಲಿ ಗೋಳಿಯಾರು ನಿವಾಸಿ ಪದ್ಮಲತಾ ಎಂಬ ಯುವತಿ ಶವವಾಗಿ ಪತ್ತೆಯಾಗಿದ್ದರು. ಕಾಲೇಜಿಗೆ ಹೋಗಿ ವಾಪಸ್ ಆಗುತ್ತಿದ್ದ ಪದ್ಮಲತಾ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ನೇತ್ರಾವತಿ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪದ್ಮಲತಾಳನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪದ್ಮಲತಾ ಸಾವಿನ ಬಗ್ಗೆ ಮರು ತನಿಖೆ ನಡೆಸುವಂತೆ ಅವರ ಸಹೋದರಿ ಇಂದ್ರಾವತಿ ದೂರು ನೀಡಿದ್ದಾರೆ.

Home add -Advt

ಈ ಬಗ್ಗೆ ಎಸ್ ಐಟಿ ತನಿಖೆ ನಡೆಸುವಂತೆಯೂ ಇಂದ್ರಾವತಿ ಮನವಿ ಮಾಡಿದ್ದಾರೆ. ದೂರುನ ಹಿನ್ನೆಲೆಯಲ್ಲಿ ಪದ್ಮಾವತಿ ಅಸಹಜ ಸಾವು ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

Related Articles

Back to top button