Belagavi NewsBelgaum NewsKannada NewsKarnataka NewsLatest

ಸವದತ್ತಿ ದೇವಸ್ಥಾನ, ಹೂಲಿ ಮಠಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸುಕ್ಷೇತ್ರ ಸವದತ್ತಿಯ ಶ್ರೀ ರೇಣುಕಾ ದೇವಿಯ ಸನ್ನಿಧಿಗೆ ತೆರಳಿ, ವಿಶೇಷ ಪೂಜೆಯನ್ನು ಸಲ್ಲಿಸಿ, ದೇವಿಯ ದರ್ಶನ ಆಶೀರ್ವಾದ ಪಡೆದು, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸಿದರು.

ನಂತರ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿರುವ ಶ್ರೀ ಬಾಲಲೀಲಾ ಸಂಗಮೇಶ್ವರ ಸಂಬಯ್ಯನವರಮಠಕ್ಕೆ ತೆರಳಿ, ಶ್ರೀ ಉಮೇಶ ಅಜ್ಜನವರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ಶಾಸಕ ವಿಶ್ವಾಸ ವೈದ್ಯ ಮತ್ತಿತರರು ಇದ್ದರು.

Home add -Advt

Related Articles

Back to top button