Kannada NewsKarnataka NewsLatestPolitics

*ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ಮಗ ಇಷ್ಟೆಲ್ಲ ಮಾಡ್ತಿದ್ರೂ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ರಾ? ಮಾಜಿ ಸಂಸದ ಶಿವರಾಮೇಗೌಡ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಮುಂದೆ ವಿಕೃತ ಕಾಮಿ ಉಮೇಶ್ ರೆಡ್ಡಿಯೂ ಶೂನ್ಯ. ಆತನ ಪ್ರಕರಣಕ್ಕಿಂತಲೂ ಪ್ರಜ್ವಲ್ ರೇವಣ್ಣ ಪ್ರಕರಣಗಳು ಹೆಚ್ಚಿವೆ. ಮಗ ಇಷ್ಟೆಲ್ಲ ಮಾಡ್ತಾದ್ದರೂ ಅಪ್ಪ-ಅಮ್ಮ ಕತ್ತೆ ಕಾಯ್ತಿದ್ರಾ? ಎಂದು ಮಾಜಿ ಸಂಸದ ಎಲ್.ಶಿವರಾಮೇಗೌಡ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಮೇಗೌಡ, ಒಂದುಕಡೆ ಅಪ್ಪ, ಮತ್ತೊಂದು ಕಡೆ ಮಗ ಸೇರಿ ದೊಡ್ಡಗೌಡರನ್ನು ಈ ವಯಸ್ಸಿನಲ್ಲಿ ಚಿಂತೆ ಮಾಡುವ ಪರುಸ್ಥಿತಿಗೆ ತಂದಿದ್ದಾರೆ ಎಂದು ಗುಡುಗಿದರು.

ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಕಳೆದ 2 ವರ್ಷಗಳಿಂದ ರೇವಣ್ಣ, ಪ್ರಜ್ವಲ್ ಪೆನ್ ಡ್ರೈವ್ ಬಿಡುತ್ತೇನೆ. ಪೆನ್ ಡ್ರೈವ್ ಬಿಡುತ್ತೇನೆ ಎಂದು ಹೇಳಿಕೆ ಕೊಡುತ್ತಲೇ ಇದ್ರು ದೇವೇಗೌಡರು, ಕುಮಾರಸ್ವಾಮಿ ಈ ಬಗ್ಗೆ ಕ್ರಮಕ್ಕೆ ಮುಂದಾಗುವ ಬದಲು ಕತ್ತೆ ಕಾಯುತ್ತಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಅವರು ಮಾಡಿರುವ ಪಾಪ ಅವರೇ ಅನುಭವಿಸುತ್ತಿದ್ದಾರೆ. ಮಾಡಿದವರ ಪಾಪ ಆಡಿದವರ ಬಾಯಿಗೆ ಎಂಬ ಮಾತಿದೆ ಹಾಗಾಗಬಾರದು. ಪ್ರಜ್ವಲ್ ರೇವಣ್ಣ ಹೆಣ್ಣುಮಕ್ಕಳ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆಸುತ್ತಿದ್ದರೂ ಅವರ ಅಪ್ಪ-ಅಮ್ಮ ಯಾಕೆ ಸುಮ್ಮನಿದ್ದರು? ಎಂದು ಕಿಡಿಕಾರಿದ್ದಾರೆ.

Related Articles

Back to top button