Belagavi NewsBelgaum News

*ಕಾಡು ಹಂದಿ ಬೇಟೆ: ಆರೋಪಿ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪೂರ ತಾಲೂಕಿನ ನಾಗರಗಾಳಿ ಅರಣ್ಯ ಇಲಾಖೆ ಅಧಿಕಾರಿಗಳು ಹಲಸಿವಾಡಿ ಗ್ರಾಮದ ಅರ್ಜುನ್ ದೇವಪ್ಪ ದೇಸಾಯಿ (58) ಎನ್ನುವವನನ್ನು ಕಾಡು ಹಂದಿ ಬೇಟೆಯ ಆರೋಪದ ಮೇಲೆ ಬಂಧಿಸಿದ್ದಾರೆ.

ಅರಣ್ಯ ಇಲಾಖೆಗೆ ಲಭ್ಯವಾದ ಗುಪ್ತ ಮಾಹಿತಿಯ ಆಧಾರದಲ್ಲಿ ಆರೋಪಿಯ ಮನೆ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಆತನ ಬಳಿ ಕಾಡು ಹಂದಿಯ 2 ಕೆಜಿ ಮಾಂಸ ಪತ್ತೆಯಾಗಿದೆ. ವಿಚಾರಣೆ ವೇಳೆ ಕಾಡು ಹಂದಿ ಬೇಟೆಯಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ದೂರು ದಾಖಲಿಸಲಾಗಿದೆ.

Home add -Advt

ಈ ಕಾರ್ಯಾಚರಣೆಯನ್ನು ನಾಗರಗಾಳಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಪ್ರದೇಶಾಧಿಕಾರಿ ಪ್ರಸಾದ್ ಮಂಗಸುಳಿ, ಮೆರಡಾ ಅರಣ್ಯಪರೀಕ್ಷಾಧಿಕಾರಿ ಎಸ್.ಜಿ. ಹಿರೇಮಠ ಹಾಗೂ ಹಲಗಾ ಅರಣ್ಯಾಧಿಕಾರಿ ವಿಜಯಕುಮಾರ ಕೌಜಲಗಿ ನೆರವಿನಿಂದ ನಡೆಸಲಾಯಿತು.

Related Articles

Back to top button