Belagavi NewsBelgaum NewsKannada NewsKarnataka NewsLatest
*BREAKING: 4500ಕೋಟಿ ವಂಚನೆ ಪ್ರಕರಣ: ಆರೋಪಿ ಶಿವಾನಂದ ನೀಲಣ್ಣವರಗೆ ಜಾಮೀನು ಮಂಜೂರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ 4500 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಬೆಂಗಳೂರು 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಶಿವಾನಂದ ನೀಲವಣ್ಣವರ್ ಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ದೇಶ ಬಿಟ್ಟು ಹೋಗಬಾರದು, ಸಾಕ್ಷಿ ನಾಶ ಮಾಡಬಾರದು, ಅರ್ಜಿದಾರರು ತಲೆಮರೆಸಿಕೊಂಡು ಹೋಗುವಂತಿಲ್ಲ ಎಂದು ಶಿವಾನಂದ ನೀಲಣ್ಣವರಗೆ ಕೋರ್ಟ್ ಸೂಚನೆ ನೀಡಿದೆ.
ಜಾಮೀನು ಮಂಜೂರಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಶಿವಾನಂದ ನೀಲಣ್ಣವರ ಬಿಡುಗಡೆಯಾಗುವ ಸಾಧ್ಯತೆಯಿದೆ.
ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರೋ ಶಿವಾನಂದ ನೀಲಣ್ಣವರ ಸಾರ್ವಜನಿಕರು, ಮಾಜಿ ಸೈನಿಕರಿಂದ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ಶಿವಾನಂದ್ ನೀವಣ್ಣರ್ ನನ್ನು ಬಂಧಿಸಲಾಗಿತ್ತು.
ಶಿವಾನಂದ ನೀಲಣ್ಣವರ ಪರ ವಕೀಲ ಆರ್ ಜಿ ಪಾಟೀಲ, ಸುಧೀರ್ ನಿರ್ವಾಣಿ ವಕಾಲತ್ತು ವಹಿಸಿದ್ದರು.




