Belagavi NewsBelgaum NewsKannada NewsKarnataka NewsLatest

*ಸಹಕಾರ ಸಂಘ ಉದ್ಘಾಟಿಸಿದ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೋನೋಲಿಯಲ್ಲಿ ನೂತನವಾಗಿ ಆರಂಭಗೊಂಡಿರುವ “ಶ್ರೀ ಶಿವಶಂಭೋ ಕೋ-ಆಪ್ ಸೊಸೈಟಿ ನಿಯಮಿತ” ಸಂಸ್ಥೆಯನ್ನು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉದ್ಘಾಟಿಸಿದರು.

Home add -Advt

ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ಸಂಘಕ್ಕೆ ಶುಭ ಹಾರೈಸಿದರು. ಗ್ರಾಮೀಣ ಭಾಗದ ಆರ್ಥಿಕ ಪ್ರಗತಿ ಹಾಗೂ ಸ್ವಾವಲಂಬಿ ಬದುಕಿಗೆ ಈ ಸಹಕಾರಿ ಸಂಸ್ಥೆಯು ಮುನ್ನುಡಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ​ಯುವರಾಜ ಕದಂ, ಬಾಳು ದೇಸೂರಕರ, ಸಾಗರ ಜಂಗ್ರೂಚೆ, ಜ್ಯೋತಿಬಾ ಕಿತ್ತೂರಕರ್, ಮನೋಹರ ಬೆಳಗಾಂವ್ಕರ್, ಗುರುನಾಥ ಪಾಟೀಲ, ಮನೋಹರ ಜಂಗ್ರೂಚೆ, ಶ್ರೀಕಾಂತ ಪಾಟೀಲ, ಯಲ್ಲಪ್ಪ ಜಂಗ್ರೂಚೆ, ರೋಹಿತ ಪಾಟೀಲ, ರಚನಾ ಗಾವಡೆ, ಕೃಷ್ಣ ಜಂಗ್ರೂಚೆ ಹಾಗೂ ಶ್ರೀ ಶಿವಶಂಭೋ ಕೋ ಆಪರೇಟಿವ್ ಸೊಸೈಟಿಯ ಪ್ರವರ್ತಕ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button