Kannada NewsLatestNational

*ಗಾರ್ಡನ್ ಪ್ರವೇಶ ದ್ವಾರದ ಗೇಟ್ ಕುಸಿದು ಮೂವರ ಸಾವು*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದಾದ್ಯಂತ ಭಾರಿ ಮಳೆಯಾಗುತ್ತಿದೆ. ಬಿರುಗಾಳಿ-ಮಳೆಯಿಂದಾಗಿ ಸಂಭಾಜಿನಗರದಲ್ಲಿ ದುರಂತವೊಂದು ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ.

ಇಲ್ಲಿನ ಸಂಭಾಜಿ ನಗರದಲ್ಲಿ ಸಿದ್ಧಾರ್ಥ್ ಗಾರ್ಡನ್ ಬಳಿಯ ಪ್ರವೇಶದ್ವಾರ ಕುಸಿದು ಬಿದ್ದಿದೆ. ಅವಶೇಷಗಳಡಿ ಸಿಲುಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರವೇಶದ್ವಾರದ ಗೇಟ್ ಬಳಿ ನಿಂತಿದ್ದ ವೇಳೆ ವರುಣಾರ್ಭಟಕ್ಕೆ ಪ್ರವೇಶದ್ವಾರವೇ ಕುಸಿದು ಬಿದ್ದಿದೆ. ದುರಂತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಕುಟುಂಬಕ್ಕೆ ಪುರಸಭೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

Home add -Advt

Related Articles

Back to top button