Latest

ಪರ್ಯಾಯ ವ್ಯವಸ್ಥೆಯಾಗುವವರೆಗೆ ಏರ್ ಇಂಡಿಯಾ ಶಿಫ್ಟ್ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಪರ್ಯಾಯ ವ್ಯವಸ್ಥೆಯಾಗುವವರೆಗೆ ಬೆಳಗಾವಿಯಿಂದ ಏರ್ ಇಂಡಿಯಾ ವಿಮಾನ ಸ್ಥಳಾಂತರ ಮಾಡುವುದಿಲ್ಲ ಎಂದು ಏರ್ ಇಂಡಿಯಾ ಚೇರಮನ್ ಅಶ್ವನಿ ಲೋಹಾನಿ ಭರವಸೆ ನೀಡಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ಹೇಳಿದ್ದಾರೆ.

Home add -Advt

ಇಂದು ಲೋಹಾನಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಏರ್ ಇಂಡಿಯಾ ಸ್ಥಳಾಂತರಿಸುವುದಾದರೆ ಪರ್ಯಾಯವಾಗಿ ಅಲಾಯನ್ಸ್ ಏರ್ ವಿಮಾನವನ್ನು ಬೆಳಗಾವಿಯಿಂದ ಬೆಂಗಳೂರಿಗೆ ಆರಂಭಿಸುವಂತೆ ವಿನಂತಿಸಿದ್ದೇನೆ. ಅದಕ್ಕೆ ಪ್ರತಿಕ್ರಿಯಿಸಿರುವ ಅವರು ಬದಲಿ ವ್ಯವಸ್ಥೆಯಾಗುವವರೆಗೆ ಏರ್ ಇಂಡಿಯಾ ಶಿಫ್ಟ್ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಅಂಗಡಿ ತಿಳಿಸಿದ್ದಾರೆ.

ಇಂದು ಸಂಜೆ ಸಿವಿಲ್ ಏವಿಯೇಶನ್ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಅವರನ್ನೂ ಭೇಟಿ ಮಾಡಿ ಚರ್ಚಿಸುವುದಾಗಿ ಅಂಗಡಿ ಹೇಳಿದ್ದಾರೆ. 

Related Articles

Back to top button