Latest

ಉಪನ್ಯಾಸಕರ ಭೀಕರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಉಪನ್ಯಾಸಕರೊಬ್ಬರನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ನಡೆದಿದೆ.

59 ವರ್ಷದ ಮಾನಪ್ಪ ಗೋಪಳಾಪುರ ಹತ್ಯೆಯಾದ ಪಿಯು ಉಪನ್ಯಾಸಕ. ಮಾನಪ್ಪ ದೇವದುರ್ಗದ ಮಹಿಳಾ ಕಾಲೇಜು ಉಪನ್ಯಾಸಕರಾಗಿದ್ದರು.

Home add -Advt

ಪರೀಕ್ಷಾ ಡ್ಯೂಟಿ ಮುಗಿಸಿ ಸುರುಪುರ ತಾಲೂಕಿನ ಐನಾಳಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿದೆ. ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದೆ.

ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಐನಾಪುರ ನವಲಿಹಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Related Articles

Back to top button