Latest

ಧಾರವಾಡ ಜೈಲಲ್ಲೇ ಕುಳಿತು ಹಣಕ್ಕಾಗಿ ಉದ್ಯಮಿಗೆ ಧಮಕಿ; ಕರ್ತವ್ಯಲೋಪದಡಿ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕುಖ್ಯಾತ ರೌಡಿಯೊಬ್ಬ ಧಾರವಾಡ ಕೇಂದ್ರ ಕಾರಾಗೃಹದಲ್ಲೇ ಕುಳಿತು ಹಣಕ್ಕಾಗಿ ಉದ್ಯಮಿಯೊಬ್ಬರನ್ನು  ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ ವರ್ತಿಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಎಲ್.ಚೇತನ ಹಾಗೂ ಸಬ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಅಮಾನತುಗೊಂಡವರು.

Home add -Advt

ಧಾರವಾಡ ಜೈಲಿನಲ್ಲಿರುವ  ಶಿವಾಜಿನಗರದ ಕುಖ್ಯಾತ ರೌಡಿ ಬಾಂಬೇ ಸಲೀಂ ಎಂಬಾತ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಜೈಲಲ್ಲೇ ಕುಳಿತು ಫೋನ್ ಮೂಲಕ  ಉದ್ಯಮಿಯೊಬ್ಬರಿಗೆ ಬೆದರಿಕೆಯೊಡ್ಡುತ್ತಿದ್ದ.  ಬಾಂಬೇ ಸಲೀಂ ಹಾಗೂ ಆತನ ಸಹಚರರಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ಉದ್ಯಮಿ ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಕ್ರಮಕ್ಕಾಗಿ ಅಲೋಕ್ ಮೋಹನ ಅವರು ದೂರನ್ನು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪರೆಡ್ಡಿ ಅವರಿಗೆ ರವಾನಿಸಿದ್ದರು.ಈ ಬಗ್ಗೆ ಸಿಸಿಬಿ ತನಿಖೆ ನಡೆಸಲು ಪ್ರತಾಪ್ ರೆಡ್ಡಿ ಆದೇಶಿಸಿದ್ದರು.

ಜೈಲಲ್ಲಿರುವ ರೌಡಿ ಫೋನ್ ಮೂಲಕ ಉದ್ಯಮಿಗೆ ಬೆದರಿಸುವ ವಿಷಯದ ಅರಿವಿದ್ದರೂ ಈ ಬಗ್ಗೆ ಕ್ರಮ ವಹಿಸಿಲ್ಲವೆಂಬ ಸಿಸಿಬಿ ವರದಿಯನ್ನಾಧರಿಸಿ ಇಬ್ಬರೂ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅರುಣ್ ಯಾದವ್ ವಜಾ

 

Related Articles

Back to top button