Latest

ಉತ್ತಮ ನಟನೆಗಾಗಿ ಮಹೇಂದ್ರ ಮನೋತ್ ಗೆ ‘ವಿಶೇಷ ಸಮರ್ಪಣಾ ಪ್ರಶಸ್ತಿ:

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಆಲ್ಬಮ್ ನಲ್ಲಿನ ನಟನೆಗೆ ನಟ, ಸಮಾಜ ಸೇವಕ ಮಹೇಂದ್ರ ಮನೋತ್ ಅವರಿಗೆ ವಿಶೇಷ ಪ್ರಶಸ್ತಿ ಸಂದಿದೆ.

ಹುಬ್ಬಳ್ಳಿಯ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಮೂರು ದಿನಗಳ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ – 2022 ರಲ್ಲಿ ಚಿತ್ರನಟಿಯರಾದ ಪ್ರಿಯಾಂಕ ಉಪೇಂದ್ರ ಮತ್ತು ಭವ್ಯ ಅವರು ಮಹೇಂದ್ರ ಮನೋತ್ ಅವರಿಗೆ ಮನೋಜ್ಞ ನಟನೆಗಾಗಿ ಮುನೋತ್ ಅನುಪಸ್ಥಿತಿಯಲ್ಲಿ ನಿರ್ದೇಶಕ ಹರಿಹರನ್ ಬಿ.ಪಿ. ಅವರಿಗೆ ವಿಶೇಷ ಸಮರ್ಪಣಾ ಪ್ರಶಸ್ತಿ” ಪ್ರದಾನ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ನಿರ್ಮಿಸಿದ ‘ಹೆದರದಿರು ಓ ಮನಸೆ’ ಸಾಕ್ಷ್ಯ ಚಿತ್ರದ ಸಾಹಿತ್ಯಕ್ಕೆ ಇದೇ ಸಂದರ್ಭದಲ್ಲಿ ಮಹೇಂದ್ರ ಮನೋತ್ ಅವರಿಗೆ ಉತ್ತಮ ಸಾಹಿತ್ಯ ಪ್ರಶಸ್ತಿ ಸಂದಿದೆ.

Home add -Advt

ನಾಡ ಗೀತೆಗೆ ಸಂಗೀತಕಾರ ವಿಜಯಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಗಾಯಕ ಅಜಯ್ ವಾರಿಯರ್ ಧ್ವನಿ ಇದ್ದು, ಹರಿಹರನ್ ಬಿ.ಪಿ. ನಿರ್ದೇಶನದಲ್ಲಿ ಈ ಆಲ್ಬಮ್ ಮೂಡಿ ಬಂದಿದೆ.

ಅಕ್ರಮವಾಗಿ ಕೈಗಾರಿಕಾ ಭೂಮಿ ಸ್ವಾಧೀನ: ಸಚಿವ ಮುರಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತಕ್ಕೆ ದೂರು

https://pragati.taskdun.com/illegal-acquisition-of-industrial-land-complaint-to-l/

ಜ.12ರಂದು ಬೆಳಗಾವಿಯಲ್ಲಿ ಬೃಹತ್ ಸಮ್ಮೇಳನ; 25 ಕೋಟಿ ರೂ. ಬಿಡುಗಡೆ: ಪ್ರಧಾನಿ ಮೋದಿ ಉದ್ಘಾಟನೆ

https://pragati.taskdun.com/big-convention-in-belgaum-on-jan-12-13-25-crore-rs-release-inauguration-by-pm-modi/

Related Articles

Back to top button