
ಪ್ರಗತಿವಾಹಿನಿ ಸುದ್ದಿ: ಚನ್ನಾಗಿ ಇದ್ದ ಅಣ್ಣ-ತಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಅಣ್ಣನೇ ತಮ್ಮನನ್ನು ಹತ್ಯೆಗೈದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಎಸ್.ಧಾವಣೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣ್ ಬರಮಾ ಬಾಳೇಕುಂದ್ರಿ (28) ಕೊಲೆಯಾದ ತಮ್ಮ. ಮಾರುತಿ ಕೊಲೆ ಮಾಡಿದ ಆರೋಪಿ.
ಅಣ್ಣ-ತಮ್ಮ ಇಬ್ಬರೂ, ಕಷ್ಟಪಟ್ಟು ದುಡಿದು ಹೊಸ ಮನೆ ಕಟ್ಟಿಸಿದ್ದರು. ಮನೆ ಕಟ್ಟಿದ ಬಳಿಕ ಮದುವೆ ಮಾಡಿಕೊಳ್ಳು ಬಗ್ಗೆಯೋ ಯೋಚಿಸಿದ್ದರು. ಹೀಗಿರುವಾಗ ತಮ್ಮ ಲಕ್ಷ್ಮಣ ಕುಡಿತದ ಚಟ ಹೆಚ್ಚಿಸಿಕೊಂಡಿದ್ದ. ಇದೇ ಕಾರಣ ಅಣ್ಣ-ತಮ್ಮನ ನಡುವೆ ಗಲಾಟೆ ನಡೆದಿದ್ದು, ಕೋಪದಲ್ಲಿ ಅಣ್ಣ ಮಾರುತಿ ತಮ್ಮನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.