Kannada NewsKarnataka NewsLatest
ಸುಪ್ರೀಂಕೋರ್ಟ್ನ ಐತಿಹಾಸಿಕ ತೀರ್ಪಿಗೆ ಡಾ.ಪ್ರಭಾಕರ ಕೋರೆ ಮೆಚ್ಚುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಹುವರ್ಷಗಳ ನಂತರ ಅಯೋಧ್ಯೆಯ ರಾಮಜನ್ಮಭೂಮಿಯ ವಿವಾದಕ್ಕೆ ಸಂಬಂಧಿಸಿದ್ದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ಹಾಗೂ ಸರ್ವಾನುಮತದ ತೀರ್ಪು ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರತಿಕ್ರಿಯಿಸಿದ್ದಾರೆ.
ಕಗ್ಗಂಟಾಗಿ ಉಳಿದಿದ್ದ ಸಮಸ್ಯೆಗೆ ತಾರ್ಕಿಕ ಅತ್ಯಂತ ನೀಡಿರುವುದು ಸ್ವಾಗತಾರ್ಹವೆಂದು ಹೇಳಿರುವ ಡಾ.ಪ್ರಭಾಕರ ಕೋರೆ, ಅಸಂಖ್ಯಾತ ಹಿಂದೂಗಳಿಗೆ ನ್ಯಾಯದೊರೆತಂತಾಗಿದೆ. ಆದಷ್ಟು ಬೇಗ ಸುಪ್ರೀಂ ಕೋರ್ಟನ ಆದೇಶದಂತೆ ಕೇಂದ್ರ ಸರ್ಕಾರ ೩ ತಿಂಗಳಲ್ಲಿ ರಾಮಮಂದಿರ ಟ್ರಸ್ಟ್ ನಿರ್ಮಾಣ ಮಾಡಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಹೇಳಿದ್ದಾರೆ.
ಅಯೋಧ್ಯಾ ತೀರ್ಪು ಪ್ರಕಟ: ವಿವಾದಿತ ಭೂಮಿ ರಾಮಲಲ್ಲಾ ಪಾಲು




