Belagavi NewsBelgaum NewsKannada NewsKarnataka News

*ಶಾಹಾಪೂರ ಕಲ್ಲು ತೂರಾಟ ಪ್ರಕರಣ: 10 ಜನ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಶಾಹಾಪೂರದಲ್ಲಿ ನಿನ್ನೆ ನಡೆದ ಕಲ್ಲು ತೂರಾಟಕ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ವಶಕ್ಕೆ ಪಡೆದಿರುವ ಬೆಳಗಾವಿ ಪೊಲೀಸರು ಎರಡು ಪ್ರತ್ಯೆಕ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದಾರೆ.‌

Home add -Advt

ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್‌ ಆಡುವ ಸಂದರ್ಭದಲ್ಲಿ ಎರಡು ಯುವಕರ ಗುಂಪಿನ ನಡುವೆ ಜಗಳವಾಗಿ, ಕಲ್ಲು ತೂರಾಟ ನಡೆದಿತು. ಬಳಿಕ ಈ ಘಟನೆಯಲ್ಲಿ ಮಕ್ಕಳ ಅವರ ಪೋಷಕರು ಭಾಗಿಯಾಗಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೊಗುವ ಮುನ್ನ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣ ಮಾಡಿದರು.‌

ಕಲ್ಲು ತೂರಾಟ ನಡೆದ ಕೂಡಲೇ ಶಹಾಪೂರ ಪೊಲೀಸ್ ಠಾಣೆಯ ನಮ್ಮ ಸಿಬ್ಬಂದಿ ತಕ್ಷಣ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಈ ಘಟನೆಯ ಸಂಭಂದ ಒಟ್ಟು 2 ಪ್ರಕರಣ ದಾಖಲಿಸಿಕೊಂಡು, 10 ಜನರನ್ನು ಬಂಧಿಸಿದ್ದಾರೆ.‌ ಜೊತೆಗೆ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ.‌ ಸದ್ಯ ಶಾಹಾಪೂರದಲ್ಲಿ ವಾತಾವರಣ ಸಹಜ ಸ್ಥಿತಿಯಲ್ಲಿದೆ ಎಂದು ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

Back to top button