Kannada NewsKarnataka NewsLatest
ಎಂ.ಜಿ.ಹಿರೇಮಠ ಬೆಳಗಾವಿಗೆ ವಾಪಸ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಚುನಾವಣೆ ನಿಮಿತ್ತ ಬದಲಾವಣೆಯಾಗಿದ್ದ ಬೆಳಗಾವಿ ಜಿಲ್ಲಾಧಿಕಾರಿ ಹುದ್ದೆ ಮತ್ತೆ ಮೊದಲಿನಂತಾಗಿದೆ.
ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದು, ಹಾಲಿ ಜಿಲ್ಲಾಧಿಕಾರಿ ಹರೀಶ್ ಕುಮಾರ ತಮ್ಮ ಮೂಲ ಹುದ್ದೆ ಸಿಬ್ಬಂದಿ ನೇಮಕಾತಿ ಮತ್ತು ತರಬೇತಿ ಸಂಸ್ಥೆಗೆ ವಾಪಸ್ಸಾಗಿದ್ದಾರೆ.
ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲೆಯವರಾಗಿರುವುದರಿಂದ ಚುನಾವಣೆ ಕಾಲಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿತ್ತು.



