Belagavi NewsBelgaum NewsKannada NewsKarnataka NewsSports

*ಎತ್ತಿನಗಾಡಿ, ಕುದುರೆ ಗಾಡಿ ಶರ್ಯತ್ತು: ಜೊಲ್ಲೆ ಗ್ರುಪ್ ನಿಂದ 38 ಲಕ್ಷ ರೂ. ಬಹುಮಾನ* 

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : *ಜೊಲ್ಲೆ ಗ್ರೂಪ್ ವತಿಯಿಂದ  ಆಯೋಜಿಸಿದ  ಬೀರೇಶ್ವರ  ಜಾತ್ರೆಯ ನಿಮಿತ್ಯ ಭವ್ಯ ಎತ್ತಿನಗಾಡಿ ಹಾಗೂ ಕುದುರೆ ಗಾಡಿ ಶರ್ಯತ್ತು ಸ್ಪರ್ಧೆಗೆ ಒಟ್ಟು 38 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.* 

*ಶರ್ಯತ್ತು ಮೈದಾನದ ಅಂತಿಮ ಹಂತದ ತಯಾರಿಯನ್ನು ವೀಕ್ಷಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ ಈ ಮಾಹಿತಿ ನೀಡಿದ್ದಾರೆ.*

ರವಿವಾರ, ದಿ.11-02-2024 ರಂದು ಮುಂಜಾನೆ 9 ಗಂಟೆಗೆ ಮಲಿಕವಾಡ ಮೈದಾನ (ತಾ. ಚಿಕ್ಕೋಡಿ)ಶರ್ಯತ್ತು ಜರುಗಲಿದ್ದು  ಬೀರೇಶ್ವರ ಶರ್ಯತ್ತು ಕಮೀಟಿ ವತಿಯಿಂದ  ಈ ಕೆಳಗಿನಂತೆ ಬಹುಮಾನ ನೀಡಲಾಗುವುದು.

*ಜನರಲ್ ಎತ್ತಿನ ಗಾಡಿ ಶರ್ಯತ್ತು* 

Home add -Advt

ಪ್ರಥಮ ಸ್ಥಾನ ರೂ. 11,00,000/-ದ್ವಿತೀಯ ಸ್ಥಾನ 5,00,000/- ತೃತೀಯ ಸ್ಥಾನ 3,00,000/-ನಾಲ್ಕನೇ ಸ್ಥಾನ ರೂ.2,00,000/-

*ಎತ್ತಿನ ಗಾಡಿ ಶರ್ಯತ್ತು  ಕರ್ನಾಟಕ ಮರ್ಯಾದಿತ*

ಪ್ರಥಮ ಸ್ಥಾನ ರೂ. 5,00,000/- ದ್ವಿತೀಯ ಸ್ಥಾನ ರೂ. 3,00,000/-ತೃತೀಯ ಸ್ಥಾನ ರೂ.2,00,000/- ನಾಲ್ಕನೇ ಸ್ಥಾನ ರೂ. 1,00,000/-

*ಜನರಲ್ ಕುದುರೆ ಗಾಡಿ ಶರ್ಯತ್ತು* – ಪ್ರಥಮ ಸ್ಥಾನ ರೂ. 1,00,000/-ದ್ವಿತೀಯ ಸ್ಥಾನ ರೂ.75,000/-ತೃತೀಯ ಸ್ಥಾನ 50,000/- ಚತುರ್ಥ ಸ್ಥಾನ 25,000/-

*ಕುದುರೆ ಗಾಡಿ ಶರ್ಯತ್ತು ಕರ್ನಾಟಕ ಮರ್ಯಾದಿತ* ಪ್ರಥಮ ಸ್ಥಾನ ರೂ. 1,00,000/-ದ್ವಿತೀಯ ಸ್ಥಾನ ರೂ.75,000/- ತೃತೀಯ ಸ್ಥಾನ ರೂ. 50,000/- ಚತುರ್ಥ ಸ್ಥಾನ ರೂ. 25,000/-

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಮತಾಬ ಮಂಕಾಂದರ, ಶಂಕರ ಬಾಕಳೆ, ಅಶೋಕ ಲೋಕರೆ, ರಾಜು ಜಾಧವ, ಗುಂಡು ಮಂಗಾವತೆ ಉಪಸ್ಥಿತರಿದ್ದರು.

Related Articles

Back to top button